ಜೋಡುಪಾಲ ಬಳಿ ಬಸ್ ಪಲ್ಟಿಯಾದ ಬಸ್ ತೆರವು : ಸಂಚಾರ ಮುಕ್ತ

0

ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ ಬಸ್ ಜೋಡುಪಾಲದಲ್ಲಿ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡ ಪಲ್ಟಿಯಾಗಿ ಬಿದ್ದು ರಸ್ತೆ ಬಂದ್ ಆದುದನ್ನು ತೆರವುಗೊಳಿಸಲಾಗಿದೆ. ಬಸ್ ರಸ್ತೆಗೆ ಅಡ್ಡಲಾಗಿ ಬಿದ್ದುದರಿಂದ ಯಾವುದೇ ವಾಹನ ಆ ಕಡೆಗೆ ಈ ಕಡೆಗೆ ಸಂಚರಿಸಲಾಗದೆ ರಸ್ತೆ ಸಂಚಾರ ಬಂದ್ ಆಗಿತ್ತು. ಸಂಪಾಜೆಯಿಂದ ಮತ್ತು ಮಡಿಕೇರಿಯಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಡಿಕೇರಿಯಿಂದ ಕ್ರೇನ್ ತರಿಸಿ ಬಸ್‌ನ್ನು ತೆರವುಗೊಳಿಸಿದರು.


ಸುಮಾರು ಒಂದೂವರೆ ಗಂಟೆಗಳ ಕಾಲ ಸುಳ್ಯದಿಂದ ಮಡಿಕೇರಿ ಕಡೆ ಹೋಗುವ ಪ್ರಯಾಣಿಕರು ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ರಸ್ತೆ ಬಂದ್ ತೆರವು ಕಾರ್ಯಕ್ಕೆ ಸಂಪಾಜೆ, ಮಡಿಕೇರಿ ಪೊಲೀಸ್ ಠಾಣಾ ಸಿಬ್ಬಂದಿಗಳು ಮತ್ತು ಊರವರು ಸಹಕರಿಸಿದರು.