ಸೌಹಾರ್ದತೆಯ ಸಂದೇಶ ಸಾರಿ ವಿವಿಧ ಕಡೆ ತೆರಳಿ ಗಿಫ್ಟ್ ವಿತರಣೆ

0

ಸುನ್ನಾ ವತಿಯಿಂದ ಈದ್ ಶುಭಾಶಯ

ಈದುಲ್ ಫಿತರ್ ಹಬ್ಬದ ಪ್ರಯುಕ್ತ ಸುಳ್ಯದ ಸುನ್ನಾ ವತಿಯಿಂದ ವಿವಿಧ ಕಡೆ ತೆರಳಿ ಪ್ರಮುಖರಿಗೆ ಈದ್ ಶುಭಾಶಯ ಕೋರಿ ಗಿಫ್ಟ್ ವಿತರಿಸಿ ಶುಭಾಶಯ ಕೋರಲಾಯಿತು.

ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಫಾ.ವಿಕ್ಟರ್ ಡಿಸೋಜ, ತಹಶೀಲ್ದಾರ್ ಜಿ.ಮಂಜುನಾಥ್, ಸುಳ್ಯ ಪ್ರೆಸ್ ಕ್ಲಬ್, ಸುಳ್ಯ ಪೊಲೀಸ್ ಠಾಣೆ, ಪ್ರಮುಖರಾದ ಧನಂಜಯ ಅಡ್ಪಂಗಾಯ, ಎಂ.ಬಿ.ಸದಾಶಿವ, ಡಾ.ಹರಪ್ರಸಾದ್ ತುದಿಯಡ್ಕ, ನ.ಪಂ.ಸದಸ್ಯ ಧೀರಾ ಕ್ರಾಸ್ತಾ, ಸಿಸ್ಟರ್ ಬಿನೋಮ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್, ನ.ಪಂ.ಮುಖ್ಯಾಧಿಕಾರಿ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.

ಗಾಂಧಿನಗರ‌ ಜುಮ್ಮಾ ಮಸೀದಿಯ ಅಧ್ಯಕ್ಷ
ಕೆ.ಎಂ.ಮುಸ್ತಫ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ರಿಯಾಝ್ ಕಟ್ಟೆಕ್ಕಾರ್ಸ್,ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಖಲಂದರ್ ಎಲಿಮಲೆ ನೇತೃತ್ವದ ತಂಡ ವಿವಿಧ ಕಡೆ ತೆರಳಿ ಶುಭಾಶಯ ಕೋರಿದರು.