ಪಂಜ:ಅಂಗಾಂಗ ದಾನ ಕರಪತ್ರ ಬಿಡುಗಡೆ, ಮತ್ತು ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಅಂಗಾಂಗ ದಾನ ಕರಪತ್ರ ಬಿಡುಗಡೆ, ಮತ್ತು ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಕ್ರಮ

ಲಯನ್ಸ್ ಕ್ಲಬ್ ಪಂಜ ಮತ್ತು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಇದರ ವತಿಯಿಂದ ಏ.12 ರಂದು ಪಂಜ ಪ್ರಾರ್ಥಮಿಕ ಆರೋಗ್ಯ ಕೇಂದ್ರ ದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾಕ್ಟರ್ ಮಂಜುನಾಥ್ ವೈದ್ಯಾಧಿಕಾರಿಗಳು ಅಂಗಾಂಗ ದಾನ ಹಾಗೂ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ ಪ್ರಸ್ತಾವಿಕ ಮಾತನಾಡಿದರು. ಐವತೊಕ್ಲು ಗ್ರಾಮದ ಮೀನಾಕ್ಷಿ ಎಂಬವರು ತಾವು ಅಂಗಾಗ ದಾನ ಮಾಡುವ ಬಗ್ಗೆ ಸ್ವತಃ ಒಪ್ಪಿ ಪಂಜ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯ ರಲ್ಲಿ ಆರ್ಗನ್ ಡೊನೇಟ್ ಬಾಂಡ್ ಗೆ ಸಹಿ ಮಾಡಿದರು.


ಅವರನ್ನ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.ವೇದಿಕೆಯಲ್ಲಿ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತಡ್ಕ ಹಾಗೂ ಕೋಶಾಧಿಕಾರಿ ಆನಂದ ಗೌಡ ಜಳಕದಹೊಳೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಲಯನ್ ಡಾ.ಪ್ರಕಾಶ್ ಡಿಸೋಜಾ, ಶಶಿಧರ ಪಳಂಗಾಯ, ಕೇಶವ ಕುದ್ವ, ಸದಸ್ಯರಾದ ಚಂದ್ರಶೇಖರ್ ಪಲ್ಲೋಡಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು