ಜಾಲ್ಸೂರು: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಬಹುಮತದಿಂದ ಅಯ್ಕೆಯಾಗಲೆಂದು ವಿಶೇಷ ಭಜನಾ ಸೇವೆ

0

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯು ಎ.26ರಂದು ನಡೆದಿದ್ದು, ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಬಹುಮತದಿಂದ ಆಯ್ಕೆಯಾಗಲೆಂದು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರದಲ್ಲಿ ಮೇ.2ರಂದು ವಿಶೇಷ ಭಜನಾ ಸೇವೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳಾದ ಪಿ.ಆರ್. ಸಂದೀಪ್ ಕದಿಕಡ್ಕ, ಚರಣ ಮಹಾಬಲಡ್ಕ (ಗಡಿ), ಬಿಜೆಪಿ ಜಯರಾಮ ರೈ ಜಾಲ್ಸೂರು, ಮಾದವ ಗೌಡ ಕಾಳಮನೆ, ಸತೀಶ್ ಆಚಾರ್ಯ ಜಾಲ್ಸೂರು, ಧನರಾಜ್ ಕದಿಕಡ್ಕ, ಐ‌.ಕೆ. ಹೇಮಚಂದ್ರ ಕದಿಕಡ್ಕ, ಧರ್ಮಪಾಲ ಕೆಮನಬಳ್ಳಿ, ಗಣೇಶ್ ಅಂಬಾಡಿಮೂಲೆ, ತಿಮ್ಮಯ್ಯ ಆಚಾರ್ಯ ಜಾಲ್ಸೂರು, ನಾರ್ಣಪ್ಪ ಟೈಲರ್ ಜಾಲ್ಸೂರು, ದಾಮೋದರ ಮಹಾಬಲಡ್ಕ, ದಯಾನಂದ ಮಹಾಬಲಡ್ಕ , ಕೃಷ್ಣ ಬೆಳ್ಚಪ್ಪಾಡ ಜಾಲ್ಸೂರು, ರವೀಂದ್ರ ಜಾಲ್ಸೂರು ಸೇರಿದಂತೆ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು