ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯದ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಪವಿತ್ರವಾದ ಹಜ್ಜ್ ಯಾತ್ರೆ ಕೈಗೊಳ್ಳುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಶರೀಫ್ ಭಾರತ್ ಬಾಳಿಲ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರಾಗಿರುವ ಅಬ್ದುಲ್ಲ ಸಿ.ಪಿ ಚೆನ್ನಾರ್ ಇವರಿಗೆ SKSSF ಸುಳ್ಯ ವಲಯ ಇದರ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಮೇ.10 ರಂದು ಮಗ್ರಿಬ್ ನಮಾಜ್ ನಂತರ ಸುಳ್ಯದ ಸಮಸ್ತ ಕಾರ್ಯಾಲಯದಲ್ಲಿ ನಡೆಯಿತು.ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಇದರ ಅಧ್ಯಕ್ಷರಾದ ಅಬೂಬಕ್ಕರ್ ಎನ್.ಎಸ್ ಪೂಪಿ ಇವರು ಶಾಲು ಹೊದಿಸುವ ಮೂಲಕ ಯಾತ್ರಾರ್ಥಿಗಳನ್ನು ಬೀಳ್ಕೊಟ್ಟರು. ಇಬಾದ್ ಇದರ ಚೇರ್ಮಾನ್ ಆಗಿರುವ ಬಹು ಖಾದರ್ ಫೈಝಿ ಐವರ್ನಾಡು ಇವರು ಪ್ರಾಸ್ತಾವಿಕ ಮತ್ತು ದುವಾ ನಡೆಸಿಕೂಟ್ಟರು. SKSSF ಸುಳ್ಯ ವಲಯದ ಅನೇಕ ಸದಸ್ಯರುಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.