ಹಜ್ಜ್ ಯಾತ್ರೆಗೆ ಶರೀಫ್ ಭಾರತ್ ಬಾಳಿಲ ಮೆಕ್ಕಾ ಪ್ರಯಾಣ

0

ಮುಸಲ್ಮಾನರ ಪವಿತ್ರವಾದ ಕರ್ಮಗಳಲ್ಲೊಂದಾದ ಹಜ್ಜ್ ಕರ್ಮಗಳನ್ನು ಪೂರೈಸಲು ಶರೀಫ್ ಭಾರತ್ ಬಾಳಿಲ ಅವರು ಮೇ.16 ರಂದು ಸೌದಿ ಅರೇಬಿಯಾದ ಮೆಕ್ಕಾಗೆ ಪ್ರಯಾಣ ಹೊರಡಲಿದ್ದಾರೆ.
ಇವರು ಆರ್ಟಿಐ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ, ಬಾಳಿಲ ಗ್ರಾಮ ಪಂಚಾಯತ್ ಇದರ ಮಾಜಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ,ಪ್ರಸ್ತುತ ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ,ಮೊಹಿಯುದ್ದೀನ್ ಜುಮ್ಮಾ ಮಸೀದಿ ಅತ್ತಿಕರಮಜಲ್ ಬಾಳಿಲ ಇದರ ಉಪಾಧ್ಯಕ್ಷರಾಗಿ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.