ನಾಳೆ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ಸ್ಥಾಪಕರಾದ ದಿ. ಉಪೇಂದ್ರ ಸುಬ್ರಾಯ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಭೆ

0

ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯ ಸ್ಥಾಪಕರು, ಹಿರಿಯ ಉದ್ಯಮಿಗಳಾಗಿದ್ದ ದಿ. ಕೆ. ಉಪೇಂದ್ರ ಸುಬ್ರಾಯ ಕಾಮತ್ ಅವರಿಗೆ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ನುಡಿನಮನ ಹಾಗೂ ಶ್ರದ್ಧಾಂಜಲಿ ಸಭೆಯು ಮೇ.12ರಂದು ಬೆಳಿಗ್ಗೆ ನಡೆಯಲಿದೆ.

ದಿ. ಕೆ. ಉಪೇಂದ್ರ ಕಾಮತ್ ಅವರು 1987ರಲ್ಲಿ ವಿನೋಬನಗರದಲ್ಲಿ ರಾಷ್ಟ್ರೋತ್ಥಾನ ಶಿಶುಮಂದಿರ, 1992ರಲ್ಲಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2012ರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನು ಸ್ಥಾಪಿಸಿದ್ದರು.