ಶ್ರೀಮತಿ ಜಯಲಕ್ಷ್ಮಿ ಗೂನಡ್ಕರವರಿಗೆ ಶ್ರದ್ಧಾಂಜಲಿ ಸಭೆ

0

ಎ. 23ರಂದು ನಿಧನರಾದ ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಗೂನಡ್ಕರಿಗೆ ಶ್ರದ್ಧಾಂಜಲಿ ಸಭೆ ಮೇ. 8ರಂದು ಗೂನಡ್ಕದ ಶ್ರೀ ಶಾರದಾ ಅನುದಾನಿತ ಸ.ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನಡೆಯಿತು. ಹಿರಿಯರಾದ ಕೆ.ಪಿ. ಜಗದೀಶ್ ಕುಯಿಂತೋಡು ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಪತಿ ಎನ್.ಎಂ.ಸಿ. ನಿವೃತ್ತ ಪ್ರಥಮ ದರ್ಜೆ ಸಹಾಯಕ ಜಿ.ಜಿ. ರಮೇಶ್ ಗೂನಡ್ಕ, ಪುತ್ರರಾದ ದೀಕ್ಷಿತ್ ಗೂನಡ್ಕ, ಮನಿಶ್ ಗೂನಡ್ಕ, ಸೊಸೆ ಶ್ರೀಮತಿ ಅರ್ಪಿತಾ ದೀಕ್ಷಿತ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.