ಅರಂತೋಡು ಕಾಲೇಜು ಸಭಾ ಭವನ ನಿರ್ಮಾಣಕ್ಕೆ ಒಂದು ಲಕ್ಷ ರೂ ಗಳ ಕೊಡುಗೆ

0

ಬೆಂಗಳೂರಿನಲ್ಲಿ ಹಿರಿಯ ಇಂಜಿನಿಯರ್ ಆಗಿರುವ, ಅರಂತೋಡು ಗ್ರಾಮದ ಕಲ್ಲುಗದ್ದೆಯ ಕೆ ಆರ್ ಆನಂದರವರು ತಾನು ಪ್ರೌಢಶಾಲಾ ವಿದ್ಯಾಭ್ಯಾಸ ಪಡೆದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಸಭಾ ಭವನಕ್ಕೆ ಒಂದು ಲಕ್ಷ ರೂ ಗಳ ದೇಣಿಗೆ ನೀಡಿ ಯೋಜನೆಯ ಯಶಸ್ಸಿಗೆ ಯಶಸ್ಸು ಕೋರಿದ್ದಾರೆ.

ಇತ್ತೀಚೆಗೆ ಅವರು ಅರಂತೋಡಿನ ತಮ್ಮ ಸ್ವ ಗೃಹಕ್ಕೆ ಬಂದಾಗ ದೇಣಿಗೆಯನ್ನು ಶಾಲಾ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆನಂದರ ಮಾತೃಶ್ರೀಯವರಾದ ಶ್ರೀಮತಿ ಚಿನ್ನಮ್ಮ ರುಕ್ಮಯ್ಯ ಗೌಡ , ಹಿರಿಯ ಸಹೋದರ ಕೆ ಆರ್ ಮೋಹನ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎ ಕೆ ಜತ್ತಪ್ಪ, ಸಂಚಾಲಕರಾದ ಕೆ ಆರ್ ಗಂಗಾಧರ, ನಿರ್ದೇಶಕರಾದ ಯು.ಎಂ ಶೇಷಗಿರಿ ಉಪಸ್ಥಿತರಿದ್ದರು.