ಧರ್ಮಸ್ಥಳ ಕ್ಷೇತ್ರದಿಂದ ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆರೂ.2 ಲಕ್ಷ ದೇಣಿಗೆ

0

ಸುಳ್ಯತಾಲೂಕುಧರ್ಮಸ್ಥಳಗ್ರಾಮಾಭಿವೃದ್ದಿಯೋಜನೆ ಬಿ. ಸಿ ಟ್ರಸ್ಟ್ ವತಿಯಿಂದಅಜ್ಜಾವರ ವಲಯದ ಮಂಡೆಕೋಲು
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರದ ವತಿಯಿಂದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ರೂ. 2 ಲಕ್ಷ ದೇಣಿಗೆ ನೀಡಿರುತ್ತಾರೆ.

ಯೋಜನಾಧಿಕಾರಿ ಮಾಧವ ಗೌಡ ರವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಯವರಿಗೆ ರೂ.2 ಲಕ್ಷ ಮೊತ್ತದ ಡಿ.ಡಿ ಯನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ, ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಅಜ್ಜಾವರ ವಲಯದ ಮೇಲ್ವಿಚಾರಕಿ ವಿಶಾಲ, ಮಂಡೆಕೋಲು ಶೌರ್ಯ ವಿಪತ್ತು ಘಟಕದ ಸದಸ್ಯರಾದ ಅನಿಲ್ ತೋಟಪ್ಪಾಡಿ ,ಪ್ರಿತೇಶ್, ಸುಪ್ರೀತ್, ಒಕ್ಕೂಟದ ಉಪಾಧ್ಯಕ್ಷೆ ಮೋಹಿನಿ, ದೇವಸ್ಥಾನದ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ರಾಮಚಂದ್ರ ಮಾಸ್ತರ್, ಕೃಷ್ಣಪ್ರಸಾದ್ ಭಟ್, ಪುತ್ತು ಮಾಸ್ತರ್ ಮೂರೂರು, ಚಂದ್ರಶೇಖರ್ ಕೇನಾಜೆ, ನಾರಾಯಣ ಗೌಡ ಉಗ್ರಾಣಿ ಮನೆ,ಉಪ ಸಮಿತಿಯ ಸದಸ್ಯರಾದ ಮೇದಪ್ಪ ಗೌಡ ಬೋಳು ಗಲ್ಲು, ಪುಷ್ಪ , ಯತೀಶ್ ಬೊಳುಗಲ್ಲು, ಪ್ರತಿನಿಧಿಗಳಾದ
ಯತೀಶ್, ಶ್ರೀಮತಿ ವೇದಾವತಿ, ಶ್ರೀಮತಿ ಸುನಿತಾ ಮತ್ತಿತರರು ಉಪಸ್ಥಿತರಿದ್ದರು.