ಅರಂಬೂರು ಶಾಲೆಯ ಬಳಿಯಿಂದ ತಡರಾತ್ರಿ ಕಿಡಿಗೇಡಿಗಳಿಂದ ದನ ಕಳ್ಳತನ

0

ಅರಂಬೂರು ಶಾಲೆಯ ಬಳಿ ಇದ್ದ ದನವೊಂದನ್ನು ಕಳೆದ ತಡ ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ.


ಸ್ಥಳೀಯ ಹೋಟೆಲ್ ವ್ಯಾಪಾರ ನಡೆಸುತ್ತಿದ್ದ ಸುಬ್ಬಣ್ಣ ರೈ ಯವರಿಗೆ ಸೇರಿದ ದನ ಆಗಿದ್ದು ಸಂಜೆ ಜೋರಾಗಿ ಸುರಿದ ಮಳೆಯಿಂದಾಗಿ ದನವು ಹಟ್ಟಿಗೆ ಬಾರದೆ ಇದ್ದು ಶಾಲೆಯ ಮೈದಾನದಲ್ಲಿ ಇತ್ತೆನ್ನಲಾಗಿದೆ.


ಸುಬ್ಬಣ್ಣ ರೈ ಯವರು ಅನಾರೋಗ್ಯದಿಂದ ಇದ್ದುದರಿಂದ ಹೋಟೆಲ್ ಗೆ ಬಾರದೆ ನಾಲ್ಕೈದು ದಿನವಾಗಿತ್ತು.


ಶಾಲೆಯ ಮೈದಾನದಲ್ಲಿ ಬೇರೆ ದನಗಳು ಮಲಗಿಕೊಂಡಿತ್ತೆನ್ನಲಾಗಿದೆ. ಆದರೆ ಪ್ರತ್ಯೇಕವಾಗಿ ಸುಬ್ಬಣ್ಣ ರೈ ಯವರ ದನವನ್ನು ಮಾತ್ರ ಕಳ್ಳತನ ಮಾಡಬೇಕಾದರೆ ಸ್ಥಳೀಯರು ಗೊತ್ತಿದ್ದವರೆ ಮಾಹಿತಿ ನೀಡಿ ಕಳ್ಳತನಕ್ಕೆ ಪ್ರಚೋದನೆ ನೀಡಿರಬೇಕೆಂದು ಎಂದು ಸ್ಥಳೀಯರು ಸಂಶಯಿಸಿದ್ದಾರೆ.