ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುರಕ್ಷಾ ಅನುದಾನ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವಲಯದ ಪರಿವಾರಕಾನ ಒಕ್ಕೂಟದ ಆಶೀರ್ವಾದ ಸ್ವಸಹಾಯ ಸಂಘದ ಸದಸ್ಯರಾದ ಜೀನತ್ ಬಾನು ರವರ ಅನಾರೋಗ್ಯದ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷದ ಅಡಿಯಲ್ಲಿ ಮಂಜೂರಾದ 25,000 ರೂಪಾಯಿಯ ಚೆಕ್ ನ್ನು ಯೋಜನಾ ಕಚೇರಿಯಲ್ಲಿ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾದ ಮಾಧವರವರು ವಿತರಿಸಿದರು.

ಈ ಸಂದರ್ಭದಲ್ಲಿ ಪರಿವಾರಕಾನ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಸರಳಿಕುಂಜ, ಕಚೇರಿ ಪ್ರಬಂಧಕರಾದ ಆತಿಷ್, ಕಚೇರಿ ಸುರಕ್ಷಾ ಸಹಾಯಕಿ ವಿದ್ಯಾಶ್ರೀ, ಕಚೇರಿ ಸಿಬ್ಬಂದಿಗಳು, ಪರಿವಾರಕಾನ ಒಕ್ಕೂಟದ ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನರವರು ಉಪಸ್ಥಿತರಿದ್ದರು.