ಅಜ್ಜಾವರ ಮಾರ್ಗ ಎಂಬ ಸ್ಥಳದ ತಿರುವಿನಲ್ಲಿ ರಸ್ತೆಗೆ ವೇಗ ತಡೆ ನಾಮಫಲಕ ಅಳವಡಿಕೆಗೆ ಮನವಿ

0

ಅಜ್ಜಾವರ ಮಾರ್ಗ ಎಂಬ ಸ್ಥಳದ ತಿರುವಿನಲ್ಲಿ ರಸ್ತೆಗೆ ವೇಗ ತಡೆ ನಾಮಫಲಕ ಅಳವಡಿಕೆಗೆ ಅಜ್ಜಾವರ ಕಾಂಗ್ರೆಸ್ ಪದಾಧಿಕಾರಿಗಳು ಗ್ರಾ.ಪಂ. ಗೆ ಮನವಿ ಮಾಡಿದ್ದಾರೆ.

ಕಳೆದ ತಿಂಗಳಿನಲ್ಲಿ ಜೀಪು ಮತ್ತು ಬೈಕ್ ಮಧ್ಯೆ ಅಪಘಾತ ಆಗಿದ್ದು ಅದರಲ್ಲಿ ಬೈಕು ಸವಾರ ಸ್ಥಳದಲ್ಲೇ ತೀರಿಹೋಗಿರುತ್ತಾರೆ ಅದೇ ರೀತಿ ಇದಕ್ಕೆ ಮೊದಲಿನಿಂದಲೂ ಸದರಿ ಸ್ಥಳದಲ್ಲಿ ಸುಮಾರು ಅಪಘಾತವಾಗುತ್ತಿದೆ.

ಸುಳ್ಯ ಅಜ್ಜಾವರ ಮಂಡೆಕೋಲು ರಸ್ತೆಯ ಅಜ್ಜಾವರ ಮಾರ್ಗ ಎಂಬಲ್ಲಿ ವೇಗ ತಡೆ ಹಾಗೂ ಸುಳ್ಯ- ಅಜ್ಜಾವರ -ಮೇದಿನಡ್ಕ-ನಾರ್ಕೋಡು ರಸ್ತೆಯ ಮೇದಿನಡ್ಕ ಜಂಕ್ಷನ್ ಇವುಗಳ ಎರಡಕ್ಕೂ ವೇಗ ತಡೆ ಮಾಡಿಸಿಕೊಟ್ಟು ಮುಂದಿನ ದಿನಗಳಲ್ಲಿ ಅಪಘಾತ ಆಗದ ಹಾಗೆ ಸಾರ್ವಜನಿಕರಿಗೆ ಪಂಚಾಯಿತಿ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಅಜ್ಜಾವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ , ಸುಳ್ಯ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಅಬ್ಬಾಸ್ ಎ‌.ಬಿ. ಅಡ್ಪoಗಾಯ, ವಿನೋದನ್ ಮೆದಿನಡ್ಕ , ವಿನೀತ್ ಮೇದಿನಡ್ಕ, ಶರವಣ ಮೇದಿನಡ್ಕ ಉಪಸ್ಥಿತರಿದ್ದರು.