ಸುಳ್ಯ ಗ್ಯಾರೇಜ್ ಮ್ಹಾಲಕರ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಲಕ್ಕಿ ಕೂಪನ್ ‌ಡ್ರಾ-ವಿಜೇತರಿಗೆ ಬಹುಮಾನ ವಿತರಣೆ

0

ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ಲಕ್ಕಿ ಕೂಪನ್ ಡ್ರಾ ವನ್ನು ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನೆರವೇರಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳ ಸಮ್ಮುಖದಲ್ಲಿ ಡ್ರಾ ನಡೆಸಲಾಯಿತು. ವಿಜೇತರಾದ ಮನೋಹರ ಮಕ್ಕೆಟ್ಟಿ,ಮಂಜುನಾಥ, ಯತೀಶ್, ರಾಧಾಕೃಷ್ಣ ರೈ ಮತ್ತು ಕೃಷ್ಣ ಶ್ರೀಯಾನ್ ರವರಿಗೆ ಬಹುಮಾನವನ್ನು ‌ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ವಿತರಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜನಾರ್ದನ ದೋಳ, ನಾಗೇಶ್ ಕೇರ್ಪಳ, ಮನೋಹರ ಬೊಳ್ಳೂರು, ಸತ್ಯನಾರಾಯಣ ಪೈಚಾರು ಹಾಗೂ ಸದಸ್ಯರು ಉಪಸ್ಥಿತರಿದ್ದರು.