ವಿಧಾನಪರಿಷತ್ ಚುನಾವಣೆ : ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಎನ್.ಡಿ.ಎ ಅಭ್ಯರ್ಥಿಗಳ ಪರ ಮತ ಯಾಚನೆ

0

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಜೂ.03 ರಂದು ನಡೆಯಲಿದ್ದು ಮೇ.28 ರಂದು ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಭ್ಯರ್ಥಿಗಳಾದ ಧನಂಜಯ ಸರ್ಜಿ ,ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇ ಗೌಡರ ಪರ ಮತ ಯಾಚನೆ ಮಾಡಲಾಯಿತು.

ಶಾಸಕಿ ಭಾಗೀರಥಿ ಮುರುಳ್ಯರವರು ಮನವಿಯನ್ನು ನೀಡಿ ಮತ ಯಾಚನೆ ಮಾಡಿದರು.

ಪ್ರಮುಖರಾದ ಎಸ್.ಎನ್ ಮನ್ಮಥ, ವಸಂತ ನಡುಬೈಲು, ಸಂತೋಷ್ ಜಾಕೆ, ಕುಸುಮಾವತಿ ಕೆಳಗಿನಗುತ್ತು ಉಪಸ್ಥಿತರಿದ್ದರು.