ಬೆಳ್ಳಾರೆ ಗೌರಿಪುರಂ ರಾಜರಾಜೇಶ್ವರಿ ದೇವಿಯ ಕುರಿತ ಭಕ್ತಿಗೀತೆ ಶ್ರೀಚಕ್ರರೂಪಿಣಿ ಬಿಡುಗಡೆ

0

ಮೇ. 27ರಂದು ಬೆಳ್ಳಾರೆ ಗೌರಿಪುರಂನ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ನಡೆದ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಮತ್ತು ಶ್ರೀಮತಿ ಸುಲೋಚನ ದಂಪತಿಗಳ ಪುತ್ರಿ ಅನುಶ ಪಡ್ಪು ಹಾಡಿದ ಶ್ರೀ ರಾಜರಾಜೇಶ್ವರಿ ದೇವಿಯ ಗುಣಗಾನದ ಭಕ್ತಿಗೀತೆಯ ಧ್ವನಿಸುರುಳಿ ಬಿಡುಗಡೆ ನಡೆಯಿತು. ಶ್ರೀಚಕ್ರರೂಪಿಣಿ ಎಂಬ ಧ್ವನಿಸುರುಳಿಯನ್ನು
ಕ್ಷೇತ್ರದ ತಂತ್ರಿಗಳಾದ ಕುನ್ನತ್ತಿಲ್ ಬ್ರಹ್ಮಶ್ರೀ ಮುರಳಿಕೃಷ್ಣ ನಂಬೂದರಿಯವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ, ಪಂಜಿಗಾರು ಮತ್ತು ಎರಡೂ ಸಮಿತಿಗಳ ಪದಾಧಿಕಾರಿಗಳು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.