ಸುಬ್ರಹ್ಮಣ್ಯ : ಭಾರಿ ಮಳೆ

0

ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ವ್ಯಾಪಾರ ಮಳಿಗೆಯೊಳಗೆ ನುಗ್ಗಿದ ನೀರು

ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು.


ಸುಬ್ರಮಣ್ಯ ಕೆ.ಎಸ್.ಆರ್.ಸಿ ಬಸ್ಸು ನಿಲ್ದಾಣದ ಮೇಲ್ಚಾವಣಿಯಲ್ಲಿ ತುಂಬಿದ ಭಾರಿ ನೀರು ಸರಿಯಾಗಿ ಹೊರಹೋಗಲು ವ್ಯವಸ್ಥೆ ಗಳಿಲ್ಲದೆ ನೀರು ಅಲ್ಲಿಯೇ ಬಿದ್ದು ವ್ಯಾಪಾರ ಮಳಿಗೆ ಕೇಂದ್ರಗಳಿಗೆ ನುಗ್ಗಿದೆ. ಪರಿಣಾಮ ವ್ಯಾಪಾರಸ್ಥರು ಮತ್ತು ಪ್ರಯಾಣಿಕರು ಕೆಲವು ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.


ಬಸ್ ಚಾಲಕರು ಮತ್ತು ನಿರ್ವಾಹಕರು, ಪ್ರಯಾಣಿಕರರು ನಿಂತ ನೀರಿನಲ್ಲಿಯೇ ಅತ್ತ ಇತ್ತ ಚಲಿಸುವ ಪರಿಸ್ಥಿತಿ ನಿರ್ಮಾಣವಾಯಿತು.