ಸಂಪಾಜೆ :ಗಡಿಕಲ್ಲು ಬಳಿ ಕಂಟೈನರ್ ಲಾರಿ ಮತ್ತು ಜೀಪು ಅಪಘಾತ, ಜೀಪು ಚಾಲಕನಿಗೆ ಗಾಯ ಆಸ್ಪತ್ರೆಗೆ ದಾಖಲು

0

ಸಂಪಾಜೆ ಗಡಿಕಲ್ಲು ಬಳಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಕಂಟೈನರ್ ಲಾರಿ ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿ ಜೀಪು ಚಾಲಕನಿಗೆ ಗಾಯವಾದ ಘಟನೆ ಮೇ 30 ರಂದು ರಾತ್ರಿ ವರದಿಯಾಗಿದೆ.


ಮಡಿಕೇರಿ ಭಾಗದಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಕಲ್ಲುಗುಂಡಿಯಿಂದ ಕೊಯ್ನಾಡಿಗೆ ತೆರಳುತ್ತಿದ್ದ ಜೀಪು ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಬ್ಬಸಕ್ಕೆ ಜೀಪು ಪಕ್ಕದಲ್ಲಿದ್ದ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಘಟನೆಯಿಂದ ಕೊಯ್ನಾಡು ಮೂಲದ ಜೀಪು ಚಾಲಕ ಈಶ ಹಾಗೂ ಮತ್ತೋರ್ವ ಪ್ರಯಾಣಿಕನಿಗೂ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.