ಕಡಬ ಸಮೀಪ ಬೈಕ್ ಗೆ ಪಿಕಪ್ ಡಿಕ್ಕಿಯಾಗಿ ಪಿಕಪ್ ಪರಾರಿ: ಚಾಲಕನ ಪರವಾನಿಗೆ ರದ್ದು ಗೊಳಿಸಲು ಡಾ.ದೇವಿಪ್ರಸಾದ್ ಕಾನತ್ತೂರ್ ಮನವಿ

0

ಕಡಬ ಸಮೀಪ ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿ ಪಿಕಪನ್ನು ನಿಂತಿಕಲ್ಲಿನಲ್ಲಿ ತಡೆದು ನಿಲ್ಲಿಸಿ ಪೊಲೀಸರಿಗೆ
ಗೊಪ್ಪಿಸಿದ ಘಟನೆ ಮೇ.30 ರಂದು ನಡೆದಿದೆ.

ಕಡಬ ಕಡೆಯಿಂದ ಪಂಜ ಕಡೆಗೆ ಬರುತ್ತಿದ್ದ ಪಿಕಪ್ ಕಡಬ ಕಡೆಗೆ ಹೋಗುವ ಬೈಕಿಗೆ ಡಿಕ್ಕಿ ಹೊಡೆಯಿತು.ಪರಿಣಾಮ ಎಡಮಂಗಲದ ಬೈಕ್ ಸವಾರರಿಗೆ ಕಾಲಿಗೆ ಗಂಭೀರ ಗಾಯಗೊಂಡರು.


ಆದರೆ ಪಿಕಪ್ ವಾಹನವನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾದ.ಈ ವೇಳೆ ಪಿಕಪ್ ವಾಹನನ್ನು ತಡೆಯಲು ಬೈಕ್ ನಲ್ಲಿ ಅಲ್ಲಿದ್ದವರು ಹಿಂಬಾಲಿಸಿದರು. ಇದೇ ವೇಳೆ ಬೈಕ್ ನಲ್ಲಿ ಪಿಕಪ್ ನ್ನು ಹಿಂಬಾಲಿಸುತ್ತಿದ್ದವರಿಗೆ ಪುಳಿಕುಕ್ಕು ಸಮೀಪ ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಸಿಕ್ಕಿ ಅಪಘಾತದ ನಡೆದ ವಿಷಯ ತಿಳಿಸಿದರು. ಬಳಿಕ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಪಂಜಕ್ಕೆ ಕ್ವಾಲ್ ಮಾಡಿ ವಿಚಾರಿಸಿದಾಗ ಪಿಕಪ್ ನಿಂತಿಕಲ್ಲು ಕಡೆ ಹೋಗಿರುವ ಮಾಹಿತಿ ಲಭಿಸಿತ್ತು. ಬಳಿಕ ನಿಂತಿಕಲ್ಲುನ ಉಮೇಶ್ ಮರವಂಜ, ಪ್ರವೀಣ್ ಮೊದಲಾದವರಿಗೆ ಮಾಹಿತಿ ನೀಡಿದ್ದು ನಿಂತಿಕಲ್ಲಿನಲ್ಲಿ ಪಿಕಪ್ ನ್ನು ತಡೆಯುವಲ್ಲಿ ಯಶಸ್ವಿಯಾದರು.ವಾಹನ ಪತ್ತೆ ಹಚ್ಚಲು ರಜೀತ್ ಭಟ್ ಪಂಜಬೀಡು ಸಹಕರಿಸಿದರು. ಪಿಕಪ್ ಚಾಲಕ ಮಧ್ಯ ಸೇವಿಸಿದ್ದ ಎನ್ನಲಾಗಿದೆ.
ಬಳಿಕ ಪೊಲೀಸರು ಸ್ಥಳಕ್ಕೆ ಬೆಳ್ಳಾರೆ ಪೋಲೀಸರು ಆಗಮಿಸಿದ್ದು,ಕಡಬ ಪೋಲೀಸರು ಪಿಕಪ್ ವಾಹನದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮಧ್ಯಪಾನ ಮಾಡಿ ಅಜಾಗೃತವಾಗಿ ವಾಹನ ಚಾಲಾಯಿಸಿ ಅಪಘಾತ ನಡೆಸಿ ಪರಾರಿಯಾದ ಪಿಕಪ್ ಚಾಲಕ ಚಾಲನಾ ಪರವಾನಿಗೆ ರದ್ದು ಗೊಳಿಸುವಂತೆ.ಪೋಲೀಸ್ ಇಲಾಖೆಗೆ ಮನವಿ ಮಾಡಿರುವುದಾಗಿ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ತಿಳಿಸಿದ್ದಾರೆ.