ಅರಂತೋಡು : ವಾರ್ಷಿಕ ದಿಕ್ರ್ ಸ್ವಲಾತ್ ಹಾಗು ಡಾ| ಕೆ.ಎಮ್ ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ

0


ಅರಂತೋಡು ಬದ್ರಿಯಾ ಜುಮಾ ಮಸೀದಿಯಲ್ಲಿ 20ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಿಲಿಸ್ ಹಾಗು ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರ ಅನುಸ್ಮರಣಾ ಕಾರ್ಯಕ್ರಮವು ಮೇ 30ರಂದು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ದುವಾಶಿರ್ವಾಚನವನ್ನು ಅರಂತೋಡು ದಿಕ್ರ್ ಸ್ವಲಾತ್ ನ ಗೌರವಾಧ್ಯಕ್ಷರಾದ ಬಹು| ಸಯ್ಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕ ಮಾತನಾಡಿ ನಾವು ಭೂಮಿಗೆ ಪ್ರವಾಸಿಗಳಾಗಿ ಬಂದಿರುವುದು ನಮ್ಮ ಶಾಶ್ವ್ವತ ಜೀವನವು ಪರಲೋಕದಲ್ಲಿ ಮಾತ್ರ, ಯಾರಿಗೂ ನೋವು ಮತ್ತು ಕೆಡುಕನ್ನು ಬಯಸದೆ ಸಾರ್ಥಕ ಜೀವನ ನಡೆಸಬೇಕೆಂದರು. ಮುಖ್ಯ ಪ್ರಭಾಷಣವನ್ನು ಸ್ಥಳೀಯ ಖತೀಬರಾದ ಬಹು|ಇಸ್ಮಾಯಿಲ್ ಫೈಝಿ ನೀಡಿದರು. ಸದರ್ ನೌಶಾದ್ ಅಝ್ ಹರಿ. ಅಶ್ರಫ್ ಆಲಿ ಮುಸ್ಲಿಯಾರ್, ಸಂಶುದ್ಧೀನ್ ಮುಸ್ಲಿಯಾರ್, ದಿಕ್ರ್ ಸ್ವಲಾತ್ ಉಪಾಧ್ಯಕ್ಷ್ಷ ಇಬ್ರಾಹಿಂ ಕುಕ್ಕುಂಬಳ, ಜಮೀಯುತ್ತುಲ್ ಫಲಾಹ್ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷ ಹಾಜಿ ಕೆ.ಎಂ ಮೊಹಮ್ಮದ್, ಕಾರ್ಯದರ್ಶಿ ಕೆ.ಎಂ ಮೂಸಾನ್, ನಿರ್ದೇಶಕರಾದ ಎ.ಹನೀಫ್, ಕೆ.ಎಂ ಮೊಯಿದು ಕುಕ್ಕುಂಬಳ, ಅಮೀರ್ ಕುಕ್ಕುಂಬಳ, ಸಂಶುದ್ದೀನ್ ಪೆಲ್ತಡ್ಕ, ಮುಜೀಬ್ ಮನ್ಸೂರ್ ಪಾರೆಕ್ಕಲ್, ಹಿರಿಯರಾದ ಹಾಜಿ ಟಿ.ಎಂ ಬಾಬಾ ತೆಕ್ಕಿಲ್, ಹಾಜಿ ಅಹಮ್ಮದ್ ಸುಪ್ರಿಮ್, ಹಾಜಿ ಮೊಹಮ್ಮದ್ ಪಾರೆ, ಹಾಜಿ ಎ. ಅಬ್ದುಲ್ಲ ಮಾಸ್ತರ್, ದುಬೈ ಸಮಿತಿ ಗೌರವಾಧ್ಯಕ್ಷ ಬದುರುದ್ದೀನ್ ಪಠೇಲ್, ದಿಕ್ ಸ್ವಲಾತ್ ಕಾರ್ಯದರ್ಶಿ ಸಂಶುದ್ದೀನ್ ಕೆಎಯು, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್ ಮೊದಲಾದವರು ಉಪಸ್ಥಿತರಿದ್ದರು