ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯದ ನೂತನ ಮೇಲ್ವಿಚಾರಕರಿಗೆ ಅಧಿಕಾರ ಹಸ್ತಾಂತರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ವಲಯದಲ್ಲಿ ಈ ಹಿಂದೆ ಒಂದು ವರ್ಷಗಳಿಂದ ಪ್ರಿಯ ರವರು ಕರ್ತವ್ಯದಲ್ಲಿದ್ದು ಇದೀಗ ಮಂಜೇಶ್ವರ ತಾಲೂಕಿಗೆ ವರ್ಗಾವಣೆಗೊಂಡಿದ್ದು ಸುಳ್ಯ ವಲಯಕ್ಕೆ ನೂತನ ಮೇಲ್ವಿಚಾರಕಿಯಾಗಿ ಜಯಶ್ರೀ ರವರು ಆಗಮಿಸಿ ಇಂದು ಸುಳ್ಯ ತಾಲೂಕಿನ ಯೋಜನಾಧಿಕಾರಿಯರಾದ ಮಾಧವ ರವರು ವಲಯದ ಜವಾಬ್ದಾರಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಚೇರಿ ಹಣಕಾಸು ಪ್ರಬಂಧಕರಾದ ಆತೀಶ್ ಹಾಗೂ ಗಾಂಧಿನಗರ ಸೇವಾ ಪ್ರತಿನಿಧಿ ಸೌಜನ್ಯ, ಜಯನಗರ ಸೇವಾ ಪ್ರತಿನಿಧಿ ವನಿತಾ, ಪರಿವಾರಕಾನ ಸೇವಾ ಪ್ರತಿನಿಧಿ ಸುರೇಶ್ ರವರು ಉಪಸ್ಥಿತರಿದ್ದರು.