ಜಾಲ್ಸೂರು : ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಾಸಾಶನ ಮಂಜೂರಾತಿ ಪತ್ರ ಹಾಗೂ ವೀಲ್ ಚಯರ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ.ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕಿನ ಯೋಜನೆಯ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಿಶೇಷವಾಗಿ ನಿರ್ಗತಿಕರ ಮಾಸಾ ಶನವನ್ನು ಜಾಲ್ಸುರು ಗ್ರಾಮದ ಕದಿಕಡ್ಕ ನಿವಾಸಿ ಕೇಶವ ಅವರಿಗೆ ಕ್ಷೇತ್ರದಿಂದ ಮಾಸಾಶನ ಮಂಜೂರಾತಿ ಪತ್ರ ಮತ್ತು ವೀಲ್ ಚೆಯರನ್ನು ಸಮಾಜ ಸೇವಕರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಾಲ್ಸೂರು ವಲಯ ಜನಜಾಗೃತಿ ವೇದಿಕೆ ಗೌರವಧ್ಯಕ್ಷ ಜಯರಾಮ ರೈ ಜಾಲ್ಸೂರು, ಜಾಲ್ಸೂರು ಒಕ್ಕೂಟದ ಅಧ್ಯಕ್ಷ ಗಣೇಶ್ ಅಂಬಾಡಿಮೂಲೆ, ಅಂಜನಾದ್ರಿ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಜಾಲ್ಸುರು, ಜಾಲ್ಸೂರು ಒಕ್ಕೂಟದ ಕೋಶಾಧಿಕಾರಿ ಶ್ರೀಮತಿ ಭಾಗೀರಥಿ ಕಲ್ಲಮುರ, ಜಾಲ್ಸೂರು ವಲಯ ಮೇಲ್ವಿಚಾರಕ ತೀರ್ಥರಾಮ, ಸೇವಾಪ್ರತಿನಿಧಿ ಕು. ಚಂದ್ರಕಲಾ ಅಡ್ಕಾರು, ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು