ಕುಂದ್ರುಕೋಡಿ ಸೇವಾಂಜಲಿ ಮನೆಗೆ ತಹಶೀಲ್ದಾರ್ ಭೇಟಿ

0

ಜಾಲ್ಸೂರು ಗ್ರಾಮದ ಕುಂದ್ರುಕೊಡಿಯಲ್ಲಿ ಗ್ರಾ.ಪಂ ಹಾಗೂ ಸೇವಾಭಾರತಿ ಹೆಲ್ಪ್ ಲೈನ್ ವತಿಯಿಂದ ನಿರ್ಮಾಣಗೊಂಡ ಲಕ್ಷ್ಮಿ ರವರ ಸೇವಾಂಜಲಿ ಮನೆಗೆ ಸುಳ್ಯ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿದರು.

ಮೇ.29 ಕ್ಕೆ ಸೇವಾಂಜಲಿಯ ಲೋಕಾರ್ಪಣೆ ಗೊಂಡ ಬಡ ಮಹಿಳೆ ಲಕ್ಷ್ಮಿ ರವರಿಗೆ ಸೋದರಿಗೊಂದು ಸುರು ಮನೆ ಹಸ್ತಾಂತರ ಗೊಂಡ ನೆಲೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್ ರವರು ಭೇಟಿ ನೀಡಿ ಸಮಾಜ ಮುಖಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಾದ ಡಾ ಮನೋಜ್ ಅಡ್ಡಂತಡ್ಕ, ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ ಪ್ರಾಂತ ದ ಸಹ ಸೇವಾ ಪ್ರಮುಖ್ ನ. ಸೀತಾರಾಮ, ಟ್ರಸ್ಟ್ ನಿರ್ದೇಶಕ ಜಿ ಜಗನ್ನಾಥ ಜಯನಗರ, ಗೋಪಾಕೃಷ್ಣ ಭಟ್, ಜಯರಾಮ ರೈ ಉಪಸ್ಥಿತರಿದ್ದರು