ಜಿಲ್ಲಾ ಮಟ್ಟದ ಮಕ್ಕಳ ಹಬ್ಬದ ಜಾನಪದ ಗೀತೆ ಸ್ಪರ್ಧೆಯಲ್ಲಿ ರೋಟರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

0

ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಹಯೋಗದಲ್ಲಿ ಅಂಬೇಡ್ಕರ್ ಭವನ ಉರ್ವ ಸ್ಟೋರ್ ಮಂಗಳೂರು ಇಲ್ಲಿ ಜೂನ್ 07 ರಂದು ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ 2023-24 ಜಾನಪದ ಗೀತೆ ಸ್ಪರ್ಧೆಯಲ್ಲಿ ರೋಟರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿರುತ್ತಾರೆ.


ವಿದ್ಯಾರ್ಥಿನಿಯರಾದ ಕು.ವಂಶಿಕಾ, ಕು.ಪ್ರೇರಣಾ ಶೆಟ್ಟಿ, ಕು.ವಿಭಾ, ಕು.ಗಾನವಿ, ಕು.ಮೇಘನಾ, ಕು.ವಂದಿತಾ ವಿ.ಎಸ್ ಗಾಯನದಲ್ಲಿ ಪಾಲ್ಗೊಂಡಿದ್ದರು .ವಿದ್ಯಾರ್ಥಿ ಕೌಶಿಕ್ ಪ್ರಭು ತಬಲದಲ್ಲಿ ಸಹಕರಿಸಿದರು.

ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಹಾಗೂ ಕಲಾ ಶಿಕ್ಷಕರಾದ ಶ್ರೀ ಹರಿ ಪೈಂದೋಡಿ ತರಬೇತಿ ನೀಡಿದರು.