ಕಲ್ಪಣೆ : ಬಸ್ಟೆಂಡ್ ದುರಸ್ಥಿಯಾಗದೆ ಸಾರ್ವಜನಿಕರಿಗೆ ತೊಂದರೆ

0

ಕೊಡಿಯಾಲ ಗ್ರಾಮದ ಕಲ್ಪಣೆಯಲ್ಲಿ ಬಸ್ಸು ತಂಗುದಾಣದ ದುರಸ್ಥಿಯಾಗದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.


ಕಳೆದ ವರ್ಷ ಬಸ್ಟೆಂಡ್ ನ ಶೀಟ್ ಗಳು ಗಾಳಿಗೆ ಹಾರಿಹೋಗಿದ್ದು ಇಲ್ಲಿವರೆಗೆ ದುರಸ್ಥಿಪಡಿಸದೆ ಇರುವುದರಿಂದ ಮಳೆಗಾಲ ಪ್ರಾರಂಭವಾಗಿ ಸಾರ್ವಜನಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.


ವಿದ್ಯಾರ್ಥಿಗಳು ಬಸ್ಸಿಗಾಗಿ ಇಲ್ಲಿ ಕೊಡೆ ಹಿಡಿದುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮ ಪಂಚಾಯತ್ ಕೂಡಲೇ ಬಸ್ಸುನಿಲ್ದಾಣಕ್ಜೆ ಶೀಟ್ ಅಳವಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕರಿಸಬೇಕೆಂದು ವಿನಂತಿಸಿದ್ದಾರೆ.