ಆಲ್ ಇಂಡಿಯಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿವಂಗತ ಭಾವೇಶ್ ಸೋಲಂಕಿ ಸ್ಮರಣಾರ್ಥ ರಕ್ತದಾನ ಶಿಬಿರ  

0

ಆಲ್ ಇಂಡಿಯಾ ಮೊಬೈಲ್ ರೆಟೈಲರ್ ಅಸೋಸಿಯೇಷನ್ ಇದರ ಜನರಲ್ ಸೆಕ್ರೆಟರಿ ದಿವಂಗತ ಭಾವೇಶ್ ಸೋಲಂಕಿ ರವರ ಸ್ಮರಣಾರ್ಥವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಬೈಲ್ ರಿಟೇಲರ್ ಅಸೋಸಿಯೇಷನ್,ಸುಳ್ಯ ತಾಲೂಕು ಮೊಬೈಲ್  ರಿಟೇಲರ್ ಅಸೋಸಿಯೇಷನ್ ಮತ್ತು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ  ಸಹಭಾಗಿತ್ವದಲ್ಲಿ ಕೆವಿಜಿಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಬಿರ ಜೂನ್ 9ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ,ತಾಲೂಕು ಮೊಬೈಲ್ ರಿಟೈಲರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಎಸ್ ವೈ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಬೈಲ್ ರೀಟೈಲರ್ ಅಸೋಸಿಯೇಷನ್ ಇದರ ಮಾಜಿ ಅಧ್ಯಕ್ಷ ಶೈಲೇಂದ್ರ ಸರಳಾಯ,ಕೆ ವಿ ಜಿ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ನವ್ಯ ರಂಗನಾಥ್,ಡಾ. ಅಂಜಲಿ,ಶ್ರೀಮತಿ ಪ್ರೇಮಾ, ಶಶಿಧರ್,ಕೌಶಲ್ ಸ್ವಸ್ತಿಕ್, ಶ್ರೀಮತಿ ಪ್ರಮಿತ,ಕೃತಿಕಾ,  ಬ್ಲಡ್ ಬ್ಯಾಂಕಿನ ಸಿಬ್ಬಂದಿಗಳು ಮತ್ತು ಸುಳ್ಯ ತಾಲೂಕು ಮೊಬೈಲ್ ಅಸೋಸಿಯೇಷನ್ ಇದರ ಸದಸ್ಯರುಗಳು ಉಪಸ್ಥಿತರಿದ್ದರು.


ರಕ್ತದಾನ ಶಿಬಿರದಲ್ಲಿ ಸುಳ್ಯದ ಬಹುತೇಕ ಮೊಬೈಲ್ ಸಂಸ್ಥೆಗಳ ಮಾಲಕರು ಸಿಬ್ಬಂದಿಗಳು ಭಾಗವಹಿಸಿದ್ದರು.