ಏನೆಕಲ್ಲು:ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಸುಳ್ಯ ತಾಲ್ಲೂಕು ಯೋಜನೆಯ ಕಾರ್ಯಕ್ರಮದಡಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ತರಬೇತಿ ಕಾರ್ಯಕ್ರಮವನ್ನು ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಸಂತೃಪ್ತಿ ಸಭಾ ಭವನದಲ್ಲಿ ಜೂ.9 ರಂದು ಜರುಗಿತು.

ಜೇಸಿಐ ವಲಯ ತರಬೇತುದಾರ ಸೋಮಶೇಖರ ನೇರಳ ರವರು
ಒಕ್ಕೂಟದ ಸದಸ್ಯರುಗಳಿಗೆ
ದುಶ್ಚಟದಿಂದ ದೂರವಿರುವಂತೆ ಹಾಗೂ
ತಂಬಾಕು ಸೇವನೆಯಿಂದ ಬರುವ ಕಾಯಿಲೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಪಂಜ ವಲಯದ ಅಧ್ಯಕ್ಷ ಶಿವಪ್ರಸಾದ್
ಮಾದನಮನೆ, ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಸಂಕಡ್ಕ, ಉಪಾಧ್ಯಕ್ಷ ಕೇಶವ ಮಾದನ ಮನೆ, ಕಾರ್ಯದರ್ಶಿ
ಶ್ರೀಮತಿ ಜಯಲಕ್ಷ್ಮಿ ಕೋಶಾಧಿಕಾರಿ ದಿನೇಶ, ನಿಕಟ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು, ಏನೆಕಲ್ಲು ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಂಜ ವಲಯದ ಮೇಲ್ವಿಚಾರಕಿ ಶ್ರೀಮತಿ ಕಲಾವತಿ ಪಿ. ಬಿ ಪ್ರಸ್ತಾವಿಕವಾಗಿ ಮಾಹಿತಿ ನೀಡಿದರು. ಶ್ರೀಮತಿ ಅನಿತಾ.ಕೆ ಸ್ವಾಗತಿಸಿ ಸೇವಾಪ್ರತಿನಿಧಿ ಶ್ರೀಮತಿ ತಾರಾ. ಟಿ ವಂದಿಸಿದರು.