ಲಿಖಿತಾ ಎ.ಪಿ. ಅವರಿಗೆ ಮೈಕ್ರೋ ಬಯಾಲಜಿಯಲ್ಲಿ ಚಿನ್ನದ ಪದಕ

0

ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಪೆರಾಜೆಯ ಲಿಖಿತಾ ಎ.ಪಿ. ಅವರಿಗೆ ಮೈಕ್ರೋ ಬಯೋಲಜಿಯ ಅಂತಿಮ ಪರೀಕ್ಷೆಯ ಅಧಿಕ ಅಂಕ ಗಳಿಕೆಗಾಗಿ ಮಂಗಳೂರು ವಿಶ್ವ ವಿದ್ಯಾ ನಿಲಯದಿಂದ ಚಿನ್ನದ ಪದಕ‌ ಮತ್ತು‌ ನಗದು ಬಹುಮಾನ ದೊರೆತಿದೆ.

ಪೆರಾಜೆಯ ನಿವೃತ್ತ ಶಿಕ್ಷಕ ಪದ್ಮಯ್ಯ ಎ.ಆರ್. ಮತ್ತು‌ ಜಲಜಾಕ್ಷಿ ದಂಪತಿಯ ಪುತ್ರಿಯಾಗಿರುವ ಲಿಖಿತಾ ಪ್ರಸ್ತುತ ಹೈದರಾಬಾದ್ ಒಸ್ಮಾನಿಯ ಯುನಿವರ್ಸಿಟಿಯಲ್ಲಿ ಪೊರೆನ್ಸಿಕ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ‌ ಮಾಡುತ್ತಿದ್ದಾರೆ.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯೂ ಆಗಿದ್ದ ಲಿಖಿತಾ ಜೀವನ್ ರಾಂ‌ ಸುಳ್ಯ ನಿರ್ದೇಶನದ ಹಲವು ನಾಟಕಗಳಲ್ಲಿ ಅಭಿನಯಿಸಿ‌ ಮೆಚ್ಚುಗೆ ಗಳಿಸಿದ್ದರು.