ಪಂಜದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಧರ್ಮ ರಕ್ಷಾ ಯಜ್ಞ

0

ವಿಶ್ವಹಿಂದೂ ಪರಿಷತ್ ಮತ್ತು ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಜ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಧರ್ಮ ರಕ್ಷಾ ಯಜ್ಞ ನಡೆಯಿತು.

ವಿಶ್ವಹಿಂದೂ ಪರಿಷತ್ ಪ್ರಮುಖರಾದ ಕೃ.ಸೂರ್ಯನಾರಾಯಣ ರಾವ್, ಪುನೀತ್ ಅತ್ತಾವರ, ನವೀನ್ ನೆರಿಯ, ಸುನಿಲ್ ಕೆ.ಆರ್ ಭಾಗವಹಿಸಿದ್ದರು.ಈ ವೇಳೆ ಕಳೆದ ಅನೇಕ ವರ್ಷಗಳಿಂದ ಮತಾಂತರ ಗೊಂಡಿದ್ದ ಏಳು ಕುಟುಂಬದ 15 ಪುರುಷರು ಮತ್ತು 10 ಮಹಿಳೆಯರು ಸೇರಿ 25 ಜನರನ್ನು ಮರಳಿ ಮಾತೃಧರ್ಮಕ್ಕೆ ಕರೆ ತರಲಾಯಿತು.ಈ ವೇಳೆ ಕುಟುಂಬದವರಿಗೆ ಬಟ್ಟೆ,ದಿನಸಿ ಸಾಮಗ್ರಿ ಒದಗಿಸಿ ನಂತರ ಸಹ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ನಿಮ್ಮ ಜೊತೆಗಿದೆಯೆಂದು ಸಂಘಟನೆ ಪ್ರಮುಖರು ಹೇಳಿದ್ದಾರೆ.