ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

ರೂ.135.65 ಕೋಟಿಗೂ ಮಿಕ್ಕಿ ವ್ಯವಹಾರ, ರೂ.35 ಲಕ್ಷ ನಿವ್ವಳ ಲಾಭ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನವಾರ್ಷಿಕ ಮಹಾಸಭೆಯು ಸೆ.20 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು.

ಸಂಘವು ರೂ.135ಕೋಟಿ 65 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.35 ಲಕ್ಷದ 03,474.58 ನಿವ್ವಳ ಲಾಭಗಳಿಸಿದೆ.ರೂ. 2,33,16,151.79 ವಿವಿಧ ನಿಧಿಗಳಿವೆ.ರೂ.17,78,29,073.92
ವಿವಿಧ ಠೇವಣಾತಿಗಳು ಇದೆ. ರೂ.26 ಕೋಟಿ 69,82,952.00 ವಿವಿಧ ಸಾಲ ನೀಡಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ತರಗತಿಯಲ್ಲಿ ಸಂಸ್ಥೆಯು ‘ಎ”ಮುನ್ನಡೆಯುತ್ತಿದೆ.ಎಂದು ಅವರು ಹೇಳಿದರು.
ಶೇ. 7 ಡಿವಿಡೆಂಟ್ ಘೋಷಿಸಲಾಯಿತು.

ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎನ್ ಜಿ, ನಿರ್ದೇಶಕರಾದ ಮಹಾಬಲ ಕೆ, ನಾರಾಯಣ ಕೆ ಕೆ, ಶ್ರೀಮತಿ ಸುಧಾ ಎಸ್ ಭಟ್, ಶ್ರೀಮತಿ ಲಲಿತ ಪಿ, ಮಹಮ್ಮದ್ ಹನೀಫ್, ರಾಮ ನಾಯ್ಕ ಎಂ, ಕರುಣಾಕರ ಜೆ, ಶೇಷಪ್ಪ ಎ ವಿ, ಮೋಹನ್ ಕೆ ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕೃಷಿ ಭೂಮಿಯಲ್ಲಿ ಶ್ರಮದಾನ ಮಾಡಿದವರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ನಾರಾಯಣ ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ಎನ್ ಜಿ ಸ್ವಾಗತಿಸಿದರು. ಕಳೆದ ಸಾಲಿನ ವರದಿಯನ್ನು ವ್ಯವಸ್ಥಾಪಕಿ ಶ್ರೀಮತಿ ಪೂವಕ್ಕ ಪಿ ವಾಚಿಸಿದರು. ಸಂಘದ ಸಿಬ್ಬಂದಿ ಪುನೀತ್ ಮೂಲೆಮನೆ ನಿರೂಪಿಸಿದರು. ಪ್ರಸ್ತುತ ಸಾಲಿನ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವರದಿ ವಾಚಿಸಿದರು. ಸಿಬ್ಬಂದಿ ಅಶ್ವಥ್ ಕುಳ್ಸಿಗೆ ಶ್ರಮದಾನ ಮಾಡಿದವರ ಪಟ್ಟಿ ವಾಚಿಸಿದರು.ನಿರ್ದೇಶಕ ಮಹಮ್ಮದ್ ಹನೀಫ್ ವಂದಿಸಿದರು.