ಗರುಡ ಯುವಕ ಮಂಡಲ ವತಿಯಿಂದ ಶಾಲೆಗೆ ನೋಟ್ ಬುಕ್ ಪುಸ್ತಕ ವಿತರಣೆ

0

               ದ.ಕ.ಹಿ. ಪ್ರಾಥಮಿಕ ಶಾಲೆ ಅಮರ ಪಡ್ನೂರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪುಸ್ತಕ ವಿತರಣಾ ಕಾರ್ಯಕ್ರಮವು ಗರುಡ ಯುವಕ ಮಂಡಲದ ಆಶ್ರಯದಲ್ಲಿ ಜೂ.22 ರಂದು  ನಡೆಯಿತು. 

ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಯುವಜನಾ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ತೇಜಸ್ವಿ ಕಡಪಳ ಉಪಸ್ಥಿತದ್ದರು. ಸಭಾ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಯತಿನ್ ಕೊಳಂಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್.ಡಿ.ಎಂ ಅಧ್ಯಕ್ಷರಾದ ಈಶ್ವರ ಕಾಯರ, ಶಾಲಾ ಮುಖ್ಯಪಾಧ್ಯಾಯಿನಿ ರೂಪವಾಣಿ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರ ಮುರಳಿ ನಳಿಯಾರು ಉಪಸ್ಥಿತರಿದ್ದರು. ಯುವಕ ಮಂಡಲದ ಪೂರ್ವಧ್ಯಕ್ಷ ಮನೋಜ್ ಪಡ್ಪು ಸ್ವಾಗತಹಿಸಿದರು, ಶರಣ್ ಕರ್ಮಜೆ ವಂದನಾರ್ಪಣೆ ಮಾಡಿದರು, ಯುವಕ ಮಂಡಲದ ಕಾರ್ಯದರ್ಶಿ ಅರುಣ್ ಪರಮಲೆ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ದಾನಿಗಳಾದ ಅಭಿಷೇಕ್ ಪಡ್ಪು, ಅನುಷಾ ಪಡ್ಪು, ರಮ್ಯಾ ಪಡ್ಪು, ಅಕ್ಷಯ್ ಬೊಬ್ಬೆಕೇರಿ, ಸ್ವಪಿತಾ ಬೆಳ್ಳಿಪಾಡಿ ಸಹಕರಿಸಿದರು.