ಕುರುಂಜಿಗುಡ್ಡೆ ಯುವಕ ಪಯಸ್ವಿನಿ ನದಿಗೆ ಬಿದ್ದಿರಬಹುದೆಂಬ ಶಂಕೆ

0

ಅಗ್ನಿಶಾಮಕ ದಳದಿಂದ ಹುಡುಕಾಟ

ಸುಳ್ಯದ ಕುರುಂಜಿಗುಡ್ಡೆ ಯ ಯುವಕನೊಬ್ಬ ನಿನ್ನೆ ಮಧ್ಯಾಹ್ನ ದಿಂದ ನಾಪತ್ತೆಯಾಗಿದ್ದು, ಆತನ ಚಪ್ಪಲಿ ಭಸ್ಮಡ್ಕ‌ಬಳಿ ಪಯಸ್ವಿನಿ ನದಿ ಯ ತಟದಲ್ಲಿ ಪತ್ತೆಯಾಗಿದೆ.

ಕುರುಂಜಿಗುಡ್ಡೆ ಗುರುಸ್ವಾಮಿಯವರ ಪುತ್ರ ಕುಮಾರ ಎಂಬವರು ನಿನ್ನೆ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೋಗಿದ್ದರು. ಭಸ್ಮಡ್ದದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕುಮಾರರನ್ನು ಸ್ಥಳೀಯರು ವಿಚಾರಿಸಿದಾಗ, ಇಲ್ಲಿ ತನಕ ಎಂದು ಹೇಳಿದ್ದರೆಂದೂ ತಿಳಿದುಬಂದಿದೆ.

ರಾತ್ರಿ ಕುಮಾರ ಮನೆಗೆ ಹೋಗಿರಲಿಲ್ಲ. ಬಳಿಕ ಭಸ್ಮಡ್ಕದಲ್ಲಿ ಹೋಗುತ್ತಿದ್ದ ವಿಷಯ ತಿಳಿದು ಮನೆಯವರು ಪಯಸ್ವಿನಿ ನದಿ ಬಳಿ ಬಂದಾಗ ಅವರ ಚಪ್ಪಲಿ ಅಲ್ಲಿ ಪತ್ತೆಯಾಯಿತು. ಇದರಿಂದಾಗಿ ಅವರು ನದಿಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮನೆಯವರು ಪೋಲೀಸರಿಗೆ ವಿಷಯ ತಿಳಿಸಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ನದಿ ತಟದಲ್ಲಿ ಹುಡುಕಾಟ ಆರಂಭಿಸಿದ್ದಾರೆ.

ಅವರು ನದಿಗೆ ಇಳಿದಿದ್ದಾರೋ, ಅಥವಾ ಚಪ್ಪಲಿ ಅಲ್ಲಿ ಬಿಟ್ಟು ಬೇರೆ ಎಲ್ಯಾದರೂ ಹೋಗಿದ್ದಾರೋ ಎಂಬುದು ಇನ್ಬಷ್ಟೆ ತಿಳಿದು ಬರಬೇಕಾಗಿದೆ.