ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

0

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಂಗಳೂರು ವಲಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟವು ಜೂ.೧೯ರಂದು ಸಿ.ಬಿ.ಆರ್ ನ್ಯಾಶನಲ್ ಕಾಲೇಜು ಆಫ್ ಲಾ, ಶಿವಮೊಗ್ಗದಲ್ಲಿ ಜರುಗಿತು.


ಈ ಕ್ರೀಡಾಕೂಟದಲ್ಲಿ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ ಸುಳ್ಯದ ೧೦ ಕ್ರೀಡಾಪಟುಗಳು ಭಾಗವಹಿಸಿರುತ್ತಾರೆ.


ಹುಡುಗರ ವಿಭಾಗದಲ್ಲಿ ರಕ್ಷಿತ್ ಕುಮಾರ್ ಐ.ಪಿ. ,ವಿಜೇತ್ ರಾಜ್ ಯು.ಎನ್. ,ಬ್ರಿಜೇಶ್. ಎಂ. ,ಗಗನ್ ಕೆ.ಸಿ. ,ಹೇಮಂತ್ ಸೋಮಯ್ಯ. ಸಿ.ಜೆ. ,
ಮಹಮ್ಮದ್ ಮುಸ್ತಾಫ ಹಾಗೂ ಹುಡುಗಿಯರು ವಿಭಾಗದಲ್ಲಿ ಲಾವಣ್ಯ. ಎನ್ , ವನ್ಯಶ್ರೀ ಕೆ. ಹೆಚ್ ಇವರು ಭಾಗವಹಿಸಿ ಬಹುಮಾನ ಗಳಿಸಿದ್ದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಂತರ್ ವಲಯ ಕ್ರೀಡಾಕೂಟದಲ್ಲಿ ಆಯ್ಕೆಯಾಗಿದ್ದಾರೆ.