ಜಾಲ್ಸೂರು: ಐರಾವತ ಬಸ್ – ಅಟೋರಿಕ್ಷಾ ಅಪಘಾತ

0

ರಿಕ್ಷಾ ಚಾಲಕನಿಗೆ ಗಾಯ -ಆಸ್ಪತ್ರೆಗೆ ರವಾನೆ

ಐರಾವತ ಬಸ್ ಮತ್ತು ಅಟೋರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ, ರಿಕ್ಷಾ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರಿನಲ್ಲಿ ಜು.3ರಂದು ರಾತ್ರಿ ಸಂಭವಿಸಿದೆ.

ಜಾಲ್ಸೂರಿನ ಅಟೋ ಚಾಲಕರಾದ ಮಹಾಬಲಡ್ಕದ ಚನಿಯಪ್ಪ ನಾಯ್ಕ ಅವರು ಜಾಲ್ಸೂರಿನ ಅರಣ್ಯ ತಪಾಸಣಾ ಗೇಟ್ ಬಳಿ ರಿಕ್ಷಾ ತಿರುಗಿಸುತ್ತಿದ್ದ ವೇಳೆ ಸುಳ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದ್ದು, ಅಟೋರಿಕ್ಷಾ ಪಲ್ಟಿಯಾಗಿ ಚಾಲಕ ಚನಿಯಪ್ಪ ನಾಯ್ಕ ಅವರಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.