ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ. ಕೃ.ಪ. ಸ.ಸಂಘದ ನಗದು ಗುಮಾಸ್ತ ರವೀಂದ್ರ ಮುಚ್ಚಾರ ಅವರಿಗೆ ಬೀಳ್ಕೊಡುಗೆ

0

ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಗದು ಗುಮಾಸ್ತ ರವೀಂದ್ರ ಮುಚ್ಚಾರ ಸೇವಾ ನಿವೃತ್ತಿ ಹೊಂದಿದ್ದು ಅವರನ್ನು ಸಂಸ್ಥೆಯ ವತಿಯಿಂದ ಜೂ.30 ರಂದು ಗೌರವಿಸಿ ಬೀಳ್ಕೊಡಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ, ಉಪಾಧ್ಯಕ್ಷರಾದ ಶೇಖರ್ ಅಂಬೆಕಲ್ಲು, ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಸಂಘದ ನಿರ್ದೇಶಕರುಗಳಾದ ಮಣಿಕಂಠ ಕೊಳಗೆ, ವಿನೂಪ್ ಮಲ್ಲಾರ, ಗಿರೀಶ್ ಕಟ್ಟೆಮನೆ, ಮೋನಪ್ಪ ಕೊಳಗೆ, ತಾರಾನಾಥ ಮುಂಡಾಜೆ, ವಿಜಯ ಕಜ್ಜೋಡಿ ಹಾಗೂ ವಿಜಯ ಕೂಜುಗೋಡು, ಚಂದ್ರಶೇಖರ ಬಟ್ಟೋಡಿ, ದಾಮೋದರ ಕಟ್ಟೆಮನೆ, ಜನಾರ್ದನ ಗುಂಡಿಹಿತ್ಲು, ಸೊಸೈಟಿ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.