ಮಂಗಳೂರು: ಟಿ.ಎಂ. ಶಹೀದ್ ಅಭಿನಂದನಾ ಸಮಿತಿ ವತಿಯಿಂದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ – ಆಹ್ವಾನ ಪತ್ರಿಕೆ ಹಸ್ತಾಂತರ

0

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಹಕಾರ, ಧಾರ್ಮಿಕ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸಿರುವ ಅರಂತೋಡಿನ ಟಿ. ಎಂ. ಶಹೀದ್ ತೆಕ್ಕಿಲ್ ಅವರ ಅಭಿನಂದನಾ ಸಮಾರಙಭವು ಜರುಗಲಿದ್ದು, ಕಾರ್ಯಕ್ರಮ ಉದ್ಘಾಟಿಸಲಿರುವ ಕರ್ನಾಟಕ ವಿಧಾನ ಸಭಾಧ್ಯಕ್ಷ, ಟಿ. ಎಂ. ಶಹೀದ್ ರವರ ವಿದ್ಯಾರ್ಥಿ ಜೀವನದ ಒಡನಾಡಿ ಯು. ಟಿ. ಖಾದರ್ ಫರೀದ್ ಅವರನ್ನು ಅಭಿನಂದನಾ ಸಮಿತಿ ಸದಸ್ಯರುಗಳು ಮಂಗಳೂರಿನಲ್ಲಿ ಜು‌.4ರಂದು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಪದಾಧಿಕಾರಿಗಳಾದ ಪರಶುರಾಮ ಚಿಲ್ತಡ್ಕ, ಮಹಮ್ಮದ್ ಇಕ್ಬಾಲ್ ಎಲಿ ಮಲೆ, ಕೆ. ಎಂ. ಮುಸ್ತಫ, ರಂಜಿತ್ ರೈ ಮೇನಾಲ, ರಾಧಾಕೃಷ್ಣ ಬೊಳ್ಳೂರು ಮೊದಲಾವರು ಉಪಸ್ಥಿತರಿದ್ದರು.