ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮಾಚರಣೆಯ ಸಮಿತಿ ರಚನೆ

0

ಬೆಳ್ಳಾರೆ ಕೆ ಪಿ ಎಸ್ ಸಂಸ್ಥೆಯ ಪ್ರಾಥಮಿಕ ವಿಭಾಗ 100 ವಸಂತ, ಪ್ರೌಢ ವಿಭಾಗ 75 ವಸಂತ ಹಾಗೂ ಕಾಲೇಜು ವಿಭಾಗ 50 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಸಂಸ್ಥೆಯ ವಸಂತ ಸಂಭ್ರಮ 2024 ಆಚರಣಾ ಸಮಿತಿಯ ಬಗ್ಗೆ ಜೂ.30 ರಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ಕುಮಾರಿ ಭಾಗೀರಥಿ ಮುರುಳ್ಯ ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.


ಸಮಿತಿಯ ಗೌರವಾಧ್ಯಕ್ಷರಾಗಿ ನಳಿನ್ ಕುಮಾ‌ರ್ ಕಟೀಲು,ಅಧ್ಯಕ್ಷರಾಗಿ ಕುಮಾರಿ ಭಾಗೀರಥಿ ಮುರುಳ್ಯ, ಕಾರ್ಯಧ್ಯಕ್ಷರಾಗಿ ಶ್ರೀಮತಿ ರಾಜೀವಿ ಆರ್ ರೈ, ಸಂಚಾಲಕರಾಗಿ ಎಸ್. ಎನ್ ಮನ್ಮಥ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ ರೈ ಪನ್ನೆ, ಕಾರ್ಯದರ್ಶಿಯಾಗಿ ರಾಮಕೃಷ್ಣ ಭಟ್ ಕುರುಂಬುಡೆಲು, ಜತೆ ಕಾರ್ಯದರ್ಶಿಯಾಗಿ ಶರತ್ ಪೂಗವನ, ಕೋಶಾಧಿಕಾರಿಯಾಗಿ ಶ್ರೀಮತಿ ಉಮಾಕುಮಾರಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಗೌರವ ಸಲಹೆಗಾರರು ಹಾಗೂ ಉಪಾಧ್ಯಕ್ಷರುಗಳಾಗಿ ಗಣ್ಯರು, ದಾನಿಗಳ ಪಟ್ಟಿಯನ್ನು ಮಾಡಿಕೊಳ್ಳಲಾಯಿತು. ದಿನಾಂಕ : 06-07-2024 ರಂದು ಶನಿವಾರ ಅಪರಾಹ್ನ 2.30 ಕ್ಕೆ ಸರಿಯಾಗಿ ಗಣ್ಯರು ದಾನಿಗಳು ಹಿರಿಯ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕವೃಂದ ಒಳಗೊಂಡಂತೆ ಉಪಸಮಿತಿಗಳನ್ನು ರಚಿಸಿಕೊಂಡು ವಸಂತ ಸಂಭ್ರಮ 2024 ಆಚರಣಾ ಸಮಿತಿಯನ್ನು ಅಂತಿಮಗೊಳಿಸುವುದೆಂದು ನಿರ್ಣಯಿಸಲಾಯಿತು.


ಎಸ್ ಡಿ ಎಂ ಸಿ ಕಾರ್ಯಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ವಸಂತ ಸಂಭ್ರಮ 2024 ಸವಿನೆನಪಿನ ಕಾಮಗಾರಿಗಳ ಮಾಹಿತಿ ನೀಡಿದರು. ಉಪಪ್ರಾಂಶುಪಾಲರು ಉಮಾಕುಮಾರಿ ಪ್ರಾಸ್ತಾವಿಕ ಮಾತನಾಡಿದರು.


ಪದವೀಧರೇತರ ಮುಖ್ಯಗುರುಗಳು ಜಿ ಮಾಯಿಲಪ್ಪ ಸ್ವಾಗತಿಸಿದರು. ಪ್ರಾಂಶುಪಾಲರಾದ ಜನಾರ್ದನ ಕೆ ಎನ್ ವಂದಿಸಿದರು.