ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ.ಪುತ್ತೂರು

0

ಬೆಳ್ಳಾರೆ ಶಾಖೆಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು ಇದರ ಬೆಳ್ಳಾರೆ ಶಾಖೆಯು ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ ಜು.06 ರಂದು ಬೆಳಿಗ್ಗೆ ಕಚೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ,ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ,ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು, ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಕಣಜಾಲು, ಸಲಹಾ ಸಮಿತಿ ಸದಸ್ಯರುಗಳಾದ ನಾರಾಯಣ ಗೌಡ ಆರ್ವಾರ,ಎಲ್ಯಣ್ಣ ಗೌಡ ಕುಳ್ಳಂಪಾಡಿ,ಉಮೇಶ ಕೆ.ಎಂ.ಬಿ.ಕಾನಾವು, ವಾಸುದೇವ ಗೌಡ ನಡ್ಕ, ರವೀಂದ್ರ ಮರಕ್ಕಡ,ಪದ್ಮನಾಭ ಬೀಡು,ರವಿನಾಥ ಮಡ್ತಿಲ,ಶ್ರೀಮತಿ ಕಮಲಾವತಿ ಬೆಳ್ಳಾರೆ,ಪ್ರಶಾಂತ್ ತಂಟೆಪ್ಪಾಡಿ,ಕೃಷ್ಣಪ್ಪ ಗೌಡ ಕೋಡ್ತುಗುಳಿ, ಕೂಸಪ್ಪ ಗೌಡ ಮುಗುಪ್ಪು, ಶ್ರೀಧರ ಗೌಡ ಅಂಗಡಿಹಿತ್ಲು,ತಿರುಮಲೇಶ್ವರ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ,ನಿಕಟಪೂರ್ವಾಧ್ಯಕ್ಷ ವಿಶ್ವನಾಥ ಕೆಯ್ಯೂರು,ಉಮಾಕಾಂತ ಬೈಲಾಡಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ,ಶಾಖಾ ಪ್ರಬಂಧಕ ಕಾರ್ತಿಕ್ ಎಂ,ಆಂತರಿಕ ಲೆಕ್ಕಪರಿಶೋಧಕ ಧರ್ಮರಾಜ್ ಕೆ, ಕುಂಬ್ರ ಶಾಖಾ ಪ್ರಬಂಧಕ ಹರೀಶ್ ರೈ, ಸಿಬ್ಬಂದಿ ವರ್ಗದವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ನೂತನ ವಿಟ್ಲ ಶಾಖೆಯ ಆಮಂತ್ರಣ ವಿತರಣೆ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ 10 ನೇ ವಿಟ್ಲ ಶಾಖೆಯು ಜು.13 ರಂದು ಉದ್ಘಾಟನೆಗೊಳ್ಳಲಿದ್ದು ಇದರ ಆಮಂತ್ರಣವನ್ನು ವಿತರಿಸಲಾಯಿತು.