ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳಿಗೆ ಬಹುಮಾನ

0

ಪತಂಜಲಿ ಯೋಗ ಕೇಂದ್ರ (ರಿ.)ಬೆಂಗಳೂರು ಇವರು ನಡೆಸಿದ ಅಂತರ್ ಶಾಲಾ ಮತ್ತು ಕಾಲೇಜು ಹಾಗೂ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ಯಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

03 ಮತ್ತು 04ನೇ ತರಗತಿ ಬಾಲಕರ ವಿಭಾಗದಲ್ಲಿ ಶ್ರೀನಿತ್ ರೈ ದ್ವಿತೀಯ ಸ್ಥಾನ ಮತ್ತು ತರುಣ್. ಎ ತೃತೀಯ ಸ್ಥಾನ, 03 ಮತ್ತು 04ನೇ ತರಗತಿಯ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು ಚತುರ್ಥ ಸ್ಥಾನ, 07 ಮತ್ತು 8ನೇತರಗತಿಯ ಬಾಲಕಿಯರ ವಿಭಾಗದಲ್ಲಿ ಸುಖಿತಾ ಬಾಲಾಡಿ ಚತುರ್ಥಸ್ಥಾನ ಮತ್ತು ಸಿಂಚನ ರೈ ತೃತೀಯ ಸ್ಥಾನ ಹಾಗೂ ತನ್ವಿ ಅಂಚನ್ ಪಂಚಮ ಸ್ಥಾನ, 09 ಮತ್ತು 10ನೇ ತರಗತಿ ಬಾಲಕಿಯರ ವಿಭಾಗದಲ್ಲಿ ತನ್ವಿ ಚಿಕ್ಮುಳಿ ಚತುರ್ಥ ಬಹುಮಾನ ಪಡೆದುಕೊಂಡಿದ್ದಾರೆ.

ಇವರುಗಳು ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.