ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ನೂತನ ಸಮಿತಿ ರಚನೆ

0

ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ನೂತನ ಸಮಿತಿ ರಚನೆ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಕಜೆ, ಕಾರ್ಯದರ್ಶಿಯಾಗಿ ಶೇಖರ್ ಕುದ್ಪಾಜೆ

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ವಾರ್ಷಿಕ ಮಹಾಸಭೆಯು ಜು.7ರಂದು ದುಗ್ಗಲಡ್ಕ ದೈವಸ್ಥಾನದ ವಠಾರದಲ್ಲಿ ನಡೆಯಿತು.
ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸುಂದರ ರಾವ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಕಜೆ, ಗೌರವಾಧ್ಯಕ್ಷರಾಗಿ ಸುಂದರ ರಾವ್ ಕೊಡೆಂಚಡ್ಕ, ಕಾರ್ಯದರ್ಶಿಯಾಗಿ ಶೇಖರ್ ಕುದ್ಪಾಜೆ, ಉಪಾಧ್ಯಕ್ಷರಾಗಿ ನಾರಾಯಣ ಮಣಿಯಾಣಿ ದುಗ್ಗಲಡ್ಕ, ಗೌರವ ಸಲಹೆಗಾರರಾಗಿ ಬಾಲಕೃಷ್ಣ ರೈ ದುಗ್ಗಲಡ್ಕ ಮತ್ತು ದಯಾನಂದ ಸಾಲಿಯಾನ್ ಮೂಡೆಕಲ್ಲುರವರನ್ನು ಆಯ್ಕೆಮಾಡಲಾಯಿತು.


ಸದಸ್ಯರುಗಳಾಗಿ ಶಿವಪ್ರಸಾದ್ ಕುದ್ಪಾಜೆ, ಗಿರೀಶ್ ರೈ ಮೂಡೆಕಲ್ಲು, ದಿನೇಶ್ ಡಿ.ಕೆ.,ಚಂದ್ರಶೇಖರ ಗೌಡ ಮೋಂಟಡ್ಕ,ಶೇಷಪ್ಪ ರೈ ದುಗ್ಗಲಡ್ಕ,ಗಿರಿಧರ ಗೌಡ ನೆಕ್ರಾಜೆ, ಸುಬ್ರಹ್ಮಣ್ಯ ಕುಂಬೆತ್ತಿಬನ, ನಾರಾಯಣ ಕಲಾಪ್ರಿಯ, ಸಂಧ್ಯಾ ರಾಜೇಶ್, ರಾಧಾಕೃಷ್ಣ ಕಲ್ಮಡ್ಕ, ಶಿವರಾಮ ಪಾನತ್ತಿಲ, ನಾರಾಯಣ ಮಣಂಗಳ, ಚಂದ್ರಶೇಖರ ಆಚಾರ್ಯ ನೀರಬಿದಿರೆ, ಸೀತಾರಾಮ ಈಶ್ವರಡ್ಕ,ಕೃಷ್ಣಕುಮಾರ್ ಕಂದಡ್ಕ, ಮಾಧವ ಡಿ.ದುಗ್ಗಲಡ್ಕ, ನಾರಾಯಣ ಟೈಲರ್, ಜನಾರ್ದನ ಗೌಡ ಕೆದ್ಕಾನ,ಮನ್ಮಥ ಕೆದ್ಕಾನ, ನಾರಾಯಣ ನಾಯ್ಕ, ದೇವಪ್ಪ ಆಚಾರ್ಯ ಕೆದ್ಕಾನರವರನ್ನು ಆಯ್ಕೆ ಮಾಡಲಾಯಿತು.