ಕಾಯರ್ತೋಡಿ: ಅಂಗನವಾಡಿ ಸಹಾಯಕಿ ಶ್ರೀಮತಿ ಲೀಲಾವತಿ ಅವರಿಗೆ ಬೀಳ್ಕೊಡುಗೆ

0

  ಸುಳ್ಯದ ಕಾಯರ್ತೋಡಿ ಅಂಗನವಾಡಿ ಸಹಾಯಕಿಯಾಗಿದ್ದು,  ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀಮತಿ ಲೀಲಾವತಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ನಡೆಯಿತು. 

ಮುಖ್ಯ ಅತಿಥಿಯಾಗಿ ಸುಳ್ಯ ವಲಯ ಅಂಗನವಾಗಿ ಮೇಲ್ವಿಚಾರಕಿ ಶ್ರೀಮತಿ ವಿಜಯ, ನ.ಪಂ. ಸದಸ್ಯೆ ಶ್ರೀಮತಿ ಪ್ರವಿತಾ ಪ್ರಶಾಂತ್, ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಮೇದಪ್ಪ, ಶ್ರೀ ರಕ್ತೇಶ್ವರಿ ಸೇವಾಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ, ಪೋಷಕ ಸಮಿತಿಯ ಅಧ್ಯಕ್ಷೆ ಶ್ರೀಮತಿ ಅರ್ಪಿತಾ ಅನಿಲ್, ಸದಸ್ಯರಾದ ತೀರ್ಥರಾಮ ಕಾಯರ್ತೋಡಿ, ದೇವರಾಜ್ ಕುದ್ಪಾಜೆ ಶುಭ ಹಾರೈಸಿದರು.


ಶ್ರೀಮತಿ ಜಯಕೃಷ್ಣ ಸ್ವಾಗತಿಸಿದರು. ದೇವರಾಜ್ ಕುದ್ಪಾಜೆ ಅಭಿನಂದನಾ ಭಾಷಣ ಮಾಡಿದರು. ಶ್ರೀಮತಿ ಮಮತ ರಘು ಅವರು ಅಭಿನಂದನಾ ಪತ್ರವನ್ನು ವಾಚಿಸಿದರು. ಶ್ರೀಮತಿ ರೋಹಿಣಿ ಕಿಶೋರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಹಳೆ ವಿದ್ಯಾರ್ಥಿ ಗಳು,ಪೋಷಕರು, ಸಮಿತಿಯ ಸದಸ್ಯರು, ಮಹಿಳಾ ಮಂಡಲದ ಸದಸ್ಯರು, ಊರ ಮಹನೀಯರು ಮತ್ತು ಸಂಘ ಸಂಸ್ಥೆಗಳ ಸದಸ್ಯರುಗಳು ಉಪಸ್ಥಿತರಿದ್ದರು.