ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸತ್ತ ನಾಗನಿಗೆ ಸಂಸ್ಕಾರಕ್ಕೆ ನಕಾರ

0

ಸುಬ್ರಹ್ಮಣ್ಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸತ್ತ ನಾಗರ ಹಾವಿಗೆ ದಫನ ಸಂಸ್ಕಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ಕುಂಟು ನೆಪ ಹೇಳಿ ತಾತ್ಸಾರ ತೋರಿಸಿದಾಗ ನಕಾರ ಗ್ರಾ.ಪಂ ಸದಸ್ಯರೊಬ್ಬರು ಪ್ರತಿಭಟನೆಗೆ ತಯಾರಾಗಿ, ದೇವಸ್ಥಾನದ ಆಡಳಿತಾಧಿಕಾರಿ ಎ. ಸಿ ಸೂಚನೆ ಮೇರೆಗೆ ನಾಗರ ಹಾವಿಗೆ ದಫನ ವ್ಯವಸ್ಥೆ ಮಾಡಿದ ಘಟನೆ ಜು.11 ರಂದು ನಡೆದಿದೆ.

ಸರ್ಪ ಸತ್ತು ಹೋದರೆ ಅದರ ಮೃತ ದೇಹವನ್ನು ಸುಟ್ಟು ಅದಕ್ಕೆ ಮೃತ ನಂತರದ ಸರ್ಪಸಂಸ್ಕಾರ ಮಾಡುವುದು ವಾಡಿಕೆ. ಸುಬ್ರಹ್ಮಣ್ಯ ಆಸುಪಾಸು ಸಾರ್ವಜನಿಕ ಸ್ಥಳಗಳಲ್ಲಿ ಸತ್ತ ನಾಗರ ಹಾವಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸರ್ಪ ಸಂಸ್ಕಾರ ಮಾಡಲಾಗುತಿತ್ತು.

ನಿನ್ನೆ ದಿನ ಸುಬ್ರಹ್ಮಣ್ಯದ ಬೈಪಾಸ್ ರಸ್ತೆಯಲ್ಲಿ ವಾಹನದಡಿಗೆ ಬಿದ್ದು ಸರ್ಪ ಒಂದು ಸತ್ತು ಹೋಗಿತ್ತು, ಇದನ್ನು ಗಮನಿಸಿದ ಸಾರ್ವಜನಿಕರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದು ದಫನ ವ್ಯವಸ್ಥೆ ಮಾಡುವಂತೆ ಗ್ರಾ.ಪಂ ರಾಜೇಶ್ ಎನ್.ಎಸ್ ಮತ್ತಿತರರು ಮನವಿ ಮಾಡಿದರು, ಆದರೆ ಅಲ್ಲಿನ ಅಧಿಕಾರಿಗಳು ಉಡಾಫೆ ಉತ್ತರಗಳನ್ನು ನೀಡಿ ನಮಗೆ ಭಟ್ರು ಸಿಗುತ್ತಿಲ್ಲ, ಆ ಸತ್ತು ಹೋದ ಸರ್ಪವನ್ನು ದಹನ ಮಾಡಲು ತಕ್ಷಣ ಆಗುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

ಅದಕ್ಕೆ ರಾಜೇಶ್ ಎನ್ ಎಸ್ ಮತ್ತಿತರರು ಸೇರಿ ದೇವಸ್ಥಾನದ ಆಡಳಿತ ಕಚೇರಿ ಮುಂದೆ ಸತ್ತ ಸರ್ಪದ ದೇಹವನ್ನು ಇಟ್ಟು  ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಕ್ಕೆ ಹಣ ಕೊಟ್ಟರೆ ನಿಮಗೆ ಭಟ್ರು ಸಿಗುತ್ತದೆ. ಕುಕ್ಕೆಯಲ್ಲಿ ಸತ್ತು ಹೋದ ನಾಗದೇವರಿಗೆ ಸಂಸ್ಕಾರ ಮಾಡಲು ನಿಮಗೆ ಭಟ್ರು ಸಿಗುವುದಿಲ್ಲವೇ ಎಂದು ಹೇಳಿಯೇ ಅಲ್ಪ ಹೊತ್ತು ಪ್ರತಿಭಟಿಸಿದ ಘಟನೆ ನಡೆದಿದೆ. ಬಳಿಕ ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್ ಬಂದು ಸತ್ತ ನಾಗರ ಹಾವಿನ ಸಂಸ್ಕಾರಕ್ಕೆ ಏರ್ಪಾಡು ಮಾಡಿದರು.

ಪುತ್ತೂರು ಎಸಿ, ಆಡಳಿತಾಧಿಕಾರಿ ಸ್ಪಂದನೆ :

ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಎನ್ ಎಸ್ ಅವರು, ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ.
ಪುತ್ತೂರು ಉಪ ವಿಭಾಗಾಧಿಕಾರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಅಧಿಕಾರಿಯಾಗಿರುವ ಜುಬಿನ್ ಮಹಾಪಾತ್ರ ಅವರನ್ನು ಸಂಪರ್ಕ ಮಾಡಿದ್ದಾರೆ.
ತಕ್ಷಣ ಸ್ಪಂದಿಸಿದ ಅವರು ಕುಕ್ಕೆ ದೇವಸ್ಥಾನದ ವತಿಯಿಂದ ಸತ್ತ ಸರ್ಪನಿಗೆ ಸಂಸ್ಕಾರ ಮಾಡಲು ವ್ಯವಸ್ಥೆಯನ್ನು ಮಾಡಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಎನ್ ಎಸ್ ಅವರನ್ನು ವಿಚಾರಿಸಿದಾಗ ಟ್ಯಾಕ್ಸಿಯವರು ದೇವಸ್ಥಾನದವರಿಗೆ ಹೇಳಿದ್ರೂ ಕೇಳಲಿಲ್ಲ. ನಾನು ಅಧಿಕಾರಿಗಳಿಗೆ ಪೋನ್ ಮಾಡಿದ್ದೇನೆ. ರಿಸೀವ್ ಮಾಡುವುದಿಲ್ಲ. ಎಸಿ ಅವರಿಗೆ ಫೋನ್ ಮಾಡಿದಾಗ ತಕ್ಷಣ ರಿಸೀವ್ ಮಾಡಿದ್ರು-ಎಸಿ ರೆಸ್ಪೋನ್ಸ್  ಮಾಡಿದರು ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.