ಪಂಜ: ಶಿಥಿಲ ಗೊಂಡ ಜಳಕದಹೊಳೆ ಸೇತುವೆ -ಅಧಿಕಾರಿಗಳಿಂದ ಪರಿಶೀಲನೆ

0

ಪಂಜದ ಜಳಕದಹೊಳೆ ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದು ಜು.11 ರಂದು ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಲೋಕೋಪಯೋಗಿ ಇಲಾಖೆಗೆ ಪರಿಶೀಲನೆಗೆ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗೋಪಾಲ್,ಸಹಾಯಕ ಅಭಿಯಂತರ.ಪರಮೇಶ್ವರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ,ಸದಸ್ಯರಾದ ಶರತ್ ಕುದ್ವ, ಜಗದೀಶ್ ಪುರಿಯ,ಚಂದ್ರಶೇಖರ ದೇರಾಜೆ, ಶ್ರೀಮತಿ ಪ್ರಮೀಳಾ ಸಂಪ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ,ಲಿಗೋಧರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ವಾರ ಜಳಕದಹೊಳೆ ಸೇತುವೆ ಶಿಥಿಲ ಗೊಂಡಿರುವ ಕುರಿತು ಸುದ್ದಿ ವೆಬ್ಸೈಟ್ ನಲ್ಲಿ ವರದಿಯಾಗಿತ್ತು.


ಜು.11 ರಂದು ಪಂಜ ಗ್ರಾಮ ಪಂಚಾಯತ್ ಗೆ ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿದ್ದ ವೇಳೆ ಪಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯವರು ಈ ಕುರಿತು ಮನವಿ ನೀಡಿದ್ದರು.