ಅರುಣ್ ಕುಮಾರ್ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ

0

ನಾಲ್ಕೂರು ಗ್ರಾಮದ ಹಾಲೆಮಜಲು ಬಳಿಯ ಅರುಣ್ ಕುಮಾರ್ ಡಿ. ಪೊನ್ವಲ್ಲಿ ಅವರು ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ 2024ರ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಅರುಣ್ ಕುಮಾರ್ ಬೆಂಗಳೂರಿನ ಜಿ.ಪಿ.ಎಸ್.ವಿ. ಮತ್ತು ಕೋ. ಮಲ್ಲೇಶ್ವರಂ ಇಲ್ಲಿ ತರಬೇತಿ ಪಡೆದಿದ್ದಾರೆ.


ಕೃಷಿಕರಾಗಿರುವ ದೇವದಾಸ್ ಪೊನ್ವಲ್ಲಿ ಹಾಗೂ ಸರಸ್ವತಿ ದೇವಿ ದಂಪತಿ ಪುತ್ರರಾಗಿರುವ ಅರುಣ್ ಕುಮಾರ್ ಯೇನೆಕಲ್ಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು. ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣ ವ್ಯಾಸಂಗ ಮಾಡಿದ್ದಾರೆ.