ತುಳು ಒಕ್ಕೂಟ ಕುವೈತ್ ವತಿಯಿಂದ ಅಜ್ಜಾವರದಲ್ಲಿ ವಿದ್ಯಾರ್ಥಿ ವೇತನ ವಿತರಣೆ

0

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್ ಇದರ ಎಕ್ಸಿಕ್ಯೂಟಿವ್ ಆಫೀಸರ್ ಮಹಮ್ಮದ್ ಐರ್ಫಾದ್ ಅಜ್ಜಾವರ ವಿದ್ಯಾರ್ಥಿ ವೇತನ ವಿತರಿಸಿ ಶುಭ ಹಾರೈಸಿದರು. ಅಜ್ಜಾವರ ವಿವೇಕ್ ಶಾಲಾ ಸಂಚಾಲಕ ಹಸೈನಾರ್ ಹಾಜಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಮಾಸ್ತರ್, ಎಸ್‌ಡಿಎಂಸಿ ಸದಸ್ಯರುಗಳಾದ ಯಾಕೂಬ್ ಅಜ್ಜಾವರ, ರೇಣುಕಾ ಮೇನಾಲ, ಲತಾ ಮಂಡೆಕೋಲು, ಗುರುರಾಜ ಅಜ್ಜಾವರ, ವಿದ್ಯಾರ್ಥಿ ನಾಯಕಿ ಭೂಮಿಕ ಜಿ.ಜೆ, ಉಪನಾಯಕ ತಶ್ವಿನ್ ಕೆ.ಆರ್., ಹಿರಿಯ ಶಿಕ್ಷಕಿ ಶ್ರೀಮತಿ ವಿದ್ಯಾಶಂಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಅಶೋಕ್ ಕೊಳಂಗಾಯ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.