ಮರ್ಕಂಜ : ಕಾಯಿಪಳ್ಳ ಕಿಂಡಿ ಅಣೆಕಟ್ಟು ಸೇತುವೆಯಲ್ಲಿ ವಾಹನ ಸಂಚಾರಕ್ಕೆ‌ ನಿಷೇಧ

0

ತೋಟಚಾವಡಿಯ ನೂತನ ಕಿಂಡಿಅಣೆಕಟ್ಟು ಮುಳುಗಡೆ

ಮರ್ಕಂಜದ ಕಾಯಿಪಳ್ಳ ಕಿಂಡಿ ಅಣೆಕಟ್ಟು ವಿನಲ್ಲಿ‌ ವಾಹನ‌ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿದು ಬಂದಿದೆ.

ಪ್ರತಿ ವರ್ಷವೂ ಈ ಕಿಂಡಿ‌ ಅಣೆಕಟ್ಟಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಮರ ಸಿಲುಕಿ ಅಣೆಕಟ್ಟು ಮುಳುಗಡೆಯಾಗುತ್ತಿತ್ತು.‌ ಪರಿಣಾಮ ಇದರ ಎರಡು ಬದಿಯ ಮಣ್ಣು ತಡೆಗೋಡೆ ಕೂಡಾ ಕೊಚ್ಚಿ ಹೋದ ಘಟನೆಗಳು ನಡೆದಿತ್ತು. ಈ ಸೇತುವೆಗೆ ತಡೆಬೇಲಿಯೂ ಇಲ್ಲದ ಕಾರಣ ಅಪಾಯ ಸಂಭವಿಸಬಹುದು ಎಂದು ಮುಂಜಾಗೃತ ಕ್ರಮವಾಗಿ‌ ದ.ಕ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಾಯಿಪಳ್ಳ ಸೇತುವೆಗೂ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು‌ ತಿಳಿದು‌ ಬಂದಿದೆ.

ಇದೇ ನದಿಗೆ ತೋಟಚಾವಡಿ ಎಂಬಲ್ಲಿ ನೂತನವಾಗಿ ಅಣೆಕಟ್ಟು ನಿರ್ಮಾಣಗೊಂಡಿರುವುದರಿಂದ ನದಿಯಲ್ಲಿ ಬಂದ‌ ಮರದ ದಿಮ್ಮಿಗಳು ಈ ಅಣೆಕಟ್ಟಿನಲ್ಲಿ‌ ಸಿಲುಕಿ ಅಣೆಕಟ್ಟು ಮುಳುಗಡೆಯಾಗಿದೆ. ಇಲ್ಲಿ‌ ಅಣೆಕಟ್ಟು ನಿರ್ಮಾಣವಾದ ಕಾರಣ ಕಾಯಿಪಳ್ಳ ಸೇತುವೆ ಮುಳುಗಡೆಯಾಗುವುದು ನಿಂತಿದೆ.

ಹಾಗಿದ್ದರೂ ಜಿಲ್ಲಾಧಿಕಾರಿ‌ಗಳ ಸೂಚನೆಯ ಮೇರೆಗೆ ಪಂಚಾಯತ್ ವತಿಯಿಂದ ‌ಕಾಯಿಪಳ್ಳ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ‌ ಎಂದು ತಿಳಿದು ಬಂದಿದೆ.