ಆಲೆಟ್ಟಿ: ಶೇಖಪಟ್ಟಿ- ಬಾಳೆಬಲ್ಪು ಸಂಪರ್ಕ ರಸ್ತೆ ಕಡಿತ- ಕಾಲ್ನಡಿಗೆಯಲ್ಲಿ ಸಂಚಾರ

0

ಇತ್ತೀಚಿನ ದಿನಗಳಲ್ಲಿ ವಿಪರೀತ ಪ್ರಮಾಣದಲ್ಲಿ ಧಾರಕಾರ ಮಳೆ ಸುರಿಯುವುದರಿಂದ ಆಲೆಟ್ಟಿ ಗ್ರಾಮದ ಶೇಖಪಟ್ಟಿ -ಬಾಳೆಬಲ್ಪು ಎಂಬಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಭಾಗದಲ್ಲಿ ಹೊಳೆಯಲ್ಲಿ ನೀರು ಹರಿಯುವುದರಿಂದ ಶೇಖಪಟ್ಟಿ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಈ ಭಾಗದ ಜನರು ನಿರಂತರವಾಗಿ ಬೇಡಿಕೆ ಇರಿಸಿಕೊಂಡು ಬಂದಿದ್ದರು. ಸ್ಥಳಕ್ಕೆ ಇಂಜಿನಿಯರ್ ಹಾಗೂ ಸ್ಥಳೀಯಜನಪ್ರನಿಧಿಗಳು ಆಗಮಿಸಿ ಭರವಸೆ ನೀಡಿರುವುದಲ್ಲದೆ ಇಲ್ಲಿಯ ತನಕ ಬೇಡಿಕೆ ಈಡೇರಿಸಿಲ್ಲ.

ಇದರಿಂದಾಗಿ ವರ್ಷಂಪ್ರತಿ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಕಾಲುದಾರಿಯಲ್ಲಿ ಸುತ್ತು ಹಾಕಿ ನಡೆದುಕೊಂಡು ಸಂಚರಿಸುವ ಪರಿಸ್ಥಿತಿ ಮಾಮೂಲಾಗಿದೆ. ಭರವಸೆ ನೀಡಿದ ಜನಪ್ರತಿನಿಧಿಗಳು ಇನ್ನಾದರೂ ಗಮನ ಹರಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.