ಯೇನೆಕಲ್ಲು : ಕೃಷಿತೋಟ ಜಲಾವೃತ

0

ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ದ.ಕ. ಜಿಲ್ಲೆಯ ಹಲವು ಭಾಗಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ನಡೆದಿದ್ದು, ಯೇನೆಕಲ್ಲು ಭಾಗದಲ್ಲೂ ಅವಾಂತರ ಸೃಷ್ಟಿಯಾಗಿದೆ.

ಜು. 18ರಂದು ರಾತ್ರಿ ಮತ್ತು ಜು. 19ರಂದು ಬೆಳಿಗ್ಗೆ ಸುರಿದ ಮಳೆಯಿಂದಾಗಿ ಯೇನೆಕಲ್ಲ ಹೊಳೆ ತುಂಬಿ ಹರಿಯುತ್ತಿದ್ದು ಸೇತುವೆಯಿಂದ ಕೇವಲ 4 ಅಡಿ ಅಂತರದಲ್ಲಿ ಹರಿಯುತ್ತಿದೆ. ನದಿಪಾತ್ರದ ಕೃಷಿತೋಟಗಳಿಗೆ ಹೊಳೆ ನೀರು ನುಗ್ಗಿ ತೋಟ ಕೆರೆಯಂತಾಗಿದೆ. ನೀಲಪ್ಪ ಮಲ್ಲಾರ ಎಂಬವರು ತಮ್ಮ ತೋಟದಲ್ಲಿ ನೆರೆನೀರು ತುಂಬಿರುವುದನ್ನು ಮೊಬೈಲ್ ಮೂಲಕ ಕ್ಲಿಕ್ಕಿಸಿ ಸುದ್ದಿಗೆ ಕಳುಹಿಸಿದ್ದಾರೆ.