ಸಜ್ಜನ ಪ್ರತಿಷ್ಠಾನ ವತಿಯಿಂದ ಬೀಜದಕಟ್ಟೆಯಲ್ಲಿ ವನಮಹೊತ್ಸವ ಕಾರ್ಯಕ್ರಮ

0

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಪ್ರತಿಷ್ಠಾನ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆಯವರ ವೃತ್ತಿ ಜೀವನದ ಬೆಳಿಹಬ್ಬ ಸಂಭ್ರಮದ ಸವಿನೆನಪಿಗಾಗಿ ಹುಟ್ಟಿ ಬೆಳೆದ ಊರಿನಲ್ಲಿ ಇಪ್ಪತೈದು ಗಿಡಗಳನ್ನು ಬೆಳಸಿ ಸಂರಕ್ಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮ ಉದ್ಘಾಟನೆಯನ್ನು‌ ಅರಣ್ಯಾಧಿಕಾರಿಗಳಾದ ಚಂದ್ರು ನೆರವೇರಿಸಿದರು.
ಸಜ್ಜನ ಸಭಾಂಗಣ ಸುತ್ತ ಇಪ್ಪತೈದು ಗಿಡಗಳನ್ನು ನೆಟ್ಟು ವನಮಹೊತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಹಮೀದ್ ಬೀಜದಕಟ್ಟೆ,ಹಮೀದ್ ಬೀಜಕೊಚ್ಚಿ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ನಿರ್ದೇಶಕ ಸಲೀಂ ಪೆರಂಗೋಡಿ,ಮಂಜುನಾಥ್ ಹಿರಿಯೂರು, ಪೈಸಲ್ ಬೀಜದಕಟ್ಟೆ ,ಉನೈಸ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು.