ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ವಾರ್ಷಿಕ ಮಹಾಸಭೆ : ನೂತನ ಅಧ್ಯಕ್ಷರಾಗಿ ಡಾ| ಎನ್.ಎ. ಜ್ಞಾನೇಶ್ ಆಯ್ಕೆ

0

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಜು.೨೦ರಂದು ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದರು ಗೌರವ ಉಪಸ್ಥಿತರಿದ್ದರು. ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೆಶ್ ಅಂಬೆಕಲ್ಲುರವರು ಒಂದು ವರ್ಷದ ಚಟುವಟಿಕೆಗಳ ವರದಿ ವಾಚಿಸಿದರು. ಖಜಾಂಚಿ ಜನಾರ್ದನ ನಾಯ್ಕ್ ರವರು ಲೆಕ್ಕಪತ್ರ ಮಂಡಿಸಿದರು. ಅವುಗಳು ಅನುಮೋದನೆಗೊಂಡ ಬಳಿಕ ನೂತನ ಸಮಿತಿ ರಚನೆಯ ಕಾರ್ಯ ನಡೆಯಿತು. ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಯವರನ್ನು ವೇದಿಕೆಗೆ ಆಹ್ವಾನಿಸಲಾಯಿತು.


ನೂತನ ಸಮಿತಿ : ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಡಾ| ಎನ್.ಎ. ಜ್ಞಾನೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನ.ಪಂ. ಸದಸ್ಯ ರಾಜು ಪಂಡಿತ್, ಖಜಾಂಚಿಯಾಗಿ ಸ್ವಾತಿ ಸಿಟಿಯ ಶ್ರೀಕೃಷ್ಣ ಸೋಮಯಾಗಿ ಎಂ.ಎನ್. ಆಯ್ಕೆಯಾದರು.


ಉಪಾಧ್ಯಕ್ಷರುಗಳಾಗಿ ಮಾಧವ ಗೌಡ ಮಡಪ್ಪಾಡಿ, ಎ.ಸಿ.ವಸಂತ, ಪ್ರಭಾಕರನ್ ನಾಯರ್, ಶ್ರೀಮತಿ ಚಂದ್ರಾಕ್ಷಿ ಜೆ.ರೈ.. ಹಾಗೂ ಆನಂದ ಖಂಡಿಗ, ಕಾರ್ಯದರ್ಶಿಗಳಾಗಿ ಡಾ| ಹರ್ಷವರ್ಧನ್, ಶಾಫಿ ಕುತ್ತಮೊಟ್ಟೆ, ಗಿರೀಶ್ ನಾರ್ಕೋಡು, ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ, ಮುರಳೀಧರ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೆ.ಟಿ.ವಿಶ್ವನಾಥ, ಹರೀಶ್ ಬಂಟ್ವಾಳ್, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಪ್ರದೀಪ್ ಕೆ.ಎಲ್., ಚಂದ್ರಶೇಖರ ನಂಜೆ, ಜಯಂತ ರೈ ಗೋಂಟಡ್ಕ, ಪಿ.ಎಸ್. ಗಂಗಾಧರ್, ಬೆಳ್ಯಪ್ಪ ಗೌಡ ಬಳ್ಳಡ್ಕ, ರುದ್ರಕುಮಾರ್ ಎಂ.ಎಂ., ಬಾಲಕೃಷ್ಣ ಭಟ್ ಕೊಡೆಂಕಿರಿ, ಗಣೇಶ್ ಭಟ್ ಸಿ.ಎ. ಮತ್ತು ಫವಾಜ್ ಕನಕಮಜಲು ಆಯ್ಕೆಯಾದರು.